Monday, March 17, 2025

Shrimad BhAgavata in Kannada -Skandha-03-Ch-09_02

 Help:  I lost my job and looking for suitable job for my living. I have 23+ years' experience in Electronic Hardware/product development (Technical Managerial-Administrative). Refer me if you come across any suitable opening. 

prakashshettyr@gmail.com


ತಸ್ಯಾಂ ಸ ಚಾಮ್ಭೋರುಹಕರ್ಣಿಕಾಯಾಮವಸ್ಥಿತೋ ಲೋಕಮಪಶ್ಯಮಾನಃ ।

ಪರಿಕ್ರಮನ್ ವ್ಯೋಮ್ನಿ ವಿವೃತ್ತನೇತ್ರಶ್ಚತ್ವಾರಿ ಭೇಜೇSನುದಿಶಂ ಮುಖಾನಿ ॥ ೧೬॥


ತಸ್ಮಾದ್ ಯುಗಾನ್ತಶ್ವಸನಾವಘೂರ್ಣಮಹೋರ್ಮಿಚಕ್ರಾತ್ ಸಲಿಲಾದ್ ವಿರೂಢಮ್  ।

ಅಪಾಶ್ರಿತಃ ಕಞ್ಜಮು ಲೋಕತನ್ತ್ರಂ ನಾತ್ಮಾನಮದ್ಧಾSವಿದದಾದಿದೇವಃ ॥೧೭ ॥


ಬ್ರಹ್ಮಾಂಡವೆಂಬ ಕಮಲದ ಮೇಲೆ ಕುಳಿತ ಚತುರ್ಮುಖ ಎಲ್ಲಾ ಕಡೆ ನೋಡಿದ ಮತ್ತು ಆಗ ಏಕಕಾಲದಲ್ಲಿ ಎಲ್ಲಾ ಕಡೆ ನೋಡಬಲ್ಲ ನಾಲ್ಕು ಮುಖವನ್ನು ಪಡೆದ. ಆಗ ಜೋರಾಗಿ ಗಾಳಿ ಬೀಸಿ(ಕಂಪನದಿಂದ) ಪದ್ಮ ಅಲುಗಾಡಿತು ಮತ್ತು ಲೋಕವೆಂಬ ತಾವರೆಯ ಮೇಲೆ ಕುಳಿತ ಚತುರ್ಮುಖ ತಾನ್ಯಾರು ಎಂದು ತಿಳಿಯದೇ ಚಿಂತನೆಯನ್ನಾರಮ್ಭಿಸಿದ.


ಕ ಏಷ ಯೋSಸಾವಹಮಬ್ಜಪೃಷ್ಠ ಏತತ್ ಕುತೋ ವಾSಬ್ಜಮನನ್ಯದಪ್ಸು । 

 ಅಸ್ತಿ ಹ್ಯಧಸ್ತಾದಿಹ ಕಿಞ್ಚಚನೈತದಧಿಷ್ಠಿತಂ ಯತ್ರ ಸತಾ ನು ಭಾವ್ಯಮ್ ॥೧೮ ॥


ಕಮಲದ ಮೇಲಿರುವ ನಾನು ಹುಟ್ಟಿರುವುದು ಹೇಗೆ? ಏನಿದು ಕಮಲ? ಇದು ಎಲ್ಲಿಂದ ಬಂತು? ಇದರಲ್ಲಿ ನಾನು ಹೇಗೆ ಬಂದೆ?, ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಾಣದ ಬ್ರಹ್ಮ ಒಂದು ತೀರ್ಮಾನಕ್ಕೆ ಬಂದ. ಈ ಅಘಾದವಾದ ನೀರು, ಅದರಲ್ಲಿ ಕಮಲ, ಇದೆಕ್ಕೆಲ್ಲವೂ ಒಂದು ಅಧಿಷ್ಠಾನ ಇರಲೇಬೇಕು ಮತ್ತು ಅದು ಭಗವಂತನೇ ಇರಬೇಕು ಎನ್ನುವ ತೀರ್ಮಾನ ಅವನದ್ದಾಗಿತ್ತು. ಹೀಗೆ ತೀರ್ಮಾನಿಸಿದ ಬ್ರಹ್ಮ ಪರಮಾತ್ಮನನ್ನು ಕಾಣಲು ನಾಭೀಕಮಲದಲ್ಲಿ ಕೆಳಕ್ಕೆ ಹೋದ. ಆದರೆ ಅಲ್ಲೂ ಅವನಿಗೆ ಏನೂ ಕಾಣಲಿಲ್ಲ. ಪುನಃ ಮೇಲೆ ಬಂದು, ಕಮಲದಲ್ಲಿ ಕುಳಿತು ತನ್ನ ಪೂರ್ವಜನ್ಮದ ಸಂಸ್ಕಾರದಿಂದ ಅಂತರಂಗದಲ್ಲಿ ಭಗವಂತನ ಧ್ಯಾನವನ್ನು ಮಾಡಲಾರಂಭಿಸಿದ. ಚತುರ್ಮುಖ ದೇವತೆಗಳ ೧೦೦ ವರ್ಷಗಳ ಕಾಲ ಅಂದರೆ ಮಾನವರ ೩೬,೦೦೦ ವರ್ಷಗಳ ಕಾಲ ಭಗವಂತನ ಧ್ಯಾನ ಮಾಡಿದ. ಈ ಸಮಯ ಬ್ರಹ್ಮನಿಗೆ ಕೇವಲ ಒಂದು ಕ್ಷಣವಷ್ಟೇ. ಆಗ ಶೇಷಶಾಯಿ ಭಗವಂತನ ದರ್ಶನ ಬ್ರಹ್ಮದೇವರಿಗೆ ಅವರ ಹೃದಯದಲ್ಲಾಯಿತು.

ಇಲ್ಲಿ ಪೂರ್ವ ಜನ್ಮದ ಸಂಸ್ಕಾರದಿಂದ ಚತುರ್ಮುಖ ಶ್ರೀಹರಿಯೇ ನನ್ನ ಜನಕ ಎನ್ನುವುದನ್ನು ಊಹಿಸಿದ್ದಾನೆ. 

ಸತಾ ಬ್ರಹ್ಮಣಾ-

“ಸ ಬ್ರಹ್ಮಾSಚಿನ್ತಯತ್ ಕುತೋ ನು ಪದ್ಮಂ ಬ್ರಹ್ಮಣಃ ಸ್ಯಾದಿತಿ”  ಇತಿ ಸೌಕರಾಯಣಶ್ರುತಿಃ  ॥ * ॥

ಪದ್ಮ ಯಾರಿಂದ ಜನಿಸಿತು ಎಂದು ಆಲೋಚಿಸಿದ ಚತುರ್ಮುಖ, ಬಳಿಕ ಅದು ಭಗವಂತನಿಂದಲೇ ಜನಿಸಿರುವುದು ಎನ್ನುವ ತೀರ್ಮಾನಕ್ಕೆ ಬಂದ. ಆಗಷ್ಟೇ ಹುಟ್ಟಿದ ಮಗು ಪೂರ್ವಜನ್ಮದ ಸಂಸ್ಕಾರದಿಂದ ಹೇಗೆ ಮೊಲೆಹಾಲು ಕುಡಿಯಲು ತಿಳಿದಿರುತ್ತದೋ ಹಾಗೇ, ಇಲ್ಲಿ ಚತುರ್ಮುಖ ‘ಭಗವಂತನೇ ತನ್ನ ಜನಕ’ ಎನ್ನುವುದನ್ನು ತಾನೇ ತಿಳಿದ. ಆಗ ಅವನಿಗೆ ಭಗವಂತನ ದರ್ಶನವಾಯಿತು.

ಚತುರ್ಮುಖ ಕಂಡ ಪರಮಾತ್ಮನ ವರ್ಣನೆ


ಮೃಣಾಳಗೌರಾಯತಶೇಷಭೋಗಪರ್ಯಙ್ಕ ಏಕಂ ಪುರುಷಂ ಶಯಾನಮ್ ।

ಫಣಾಸಹಸ್ರಾಯುತಮೂರ್ಧರತ್ನದ್ಯುಭಿರ್ಹತಧ್ವಾನ್ತಯುಗಾನ್ತತೋಯೇ ॥ ೨೩ ॥


ಪ್ರೇಕ್ಷಂ ಕ್ಷಿಪನ್ತಂ ಹರಿತೋಪಲಾದ್ರೋಃ ಸನ್ಧ್ಯಾಭ್ರನೀವೇರುರುರುಗ್ಮಮೂರ್ಧ್ನಃ ।

ರತ್ನೋದಧೇರೋಷಧಿಸೌಮನಸ್ಯವನಸ್ರಜೋ ವೇಣುಭುಜಾಙ್ಘ್ರಿಪಾಙ್ಘ್ರೇಃ ॥ ೨೪ ॥


ಆಯಾಮತೋ ವಿಸ್ತರತಃ ಸಮಾನದೇಹೇನ ಲೋಕತ್ರಯಸಙ್ಗ್ರಹೇಣ ।

ವಿಚಿತ್ರದಿವ್ಯಾಭರಣಾಂಶುಕಾನಾಂ ಕೃತಶ್ರಿಯೋಪಾಶ್ರಿತದಿವ್ಯವೇಷಮ್ ॥ ೨೫ ॥


ಪುಂಸಾಂ ಸ್ವಕಾಮಾಯ ವಿವಿಕ್ತಮಾರ್ಗೈರಭ್ಯರ್ಚತಾಂ ಕಾಮದುಘಾಙ್ಘ್ರಿಪದ್ಮಮ್

ಪ್ರದರ್ಶಯನ್ತಂ ಕೃಪಯಾ ನಖೇಂದುಮಯೂಖಭಿನ್ನಾಙ್ಗುಲಿಚಾರುಪತ್ರಮ್ ॥ ೨೬ ॥


ಮುಖೇನ ಲೋಕಾರ್ತಿಹರಸ್ಮಿತೇನ ಪರಿಸ್ಫುರತ್ಕುಣ್ಡಲಮಣ್ಡಿತೇನ ।

ಶೋಣಾಯಿತೇನಾಧರಬಿಮ್ಬಭಾಸಾ ಪ್ರತ್ಯರ್ಹಯನ್ತಂ ಸುನಸೇನ ಸುಭ್ರ್ವಾ ॥ ೨೭ ॥


ಕದಮ್ಬಕಿಞ್ಜಲ್ಕಪಿಶಙ್ಗವಾಸಸಾ ಸ್ವಲಙ್ಕೃತಂ ಮೇಖಲಯಾ ನಿತಮ್ಬೇ ।

 ಹಾರೇಣ ಚಾನನ್ತಧನೇನ ವತ್ಸ ಶ್ರೀವತ್ಸವಕ್ಷಃಸ್ಥಲವಲ್ಲಭೇನ ॥ ೨೮ ॥


 ಪರಾರ್ಧ್ಯಕೇಯೂರಮಣಿಪ್ರವೇಕಪರ್ಯಸ್ತದೋರ್ದಣ್ಡಸಹಸ್ರಶಾಖಮ್ ।

 ಅವ್ಯಕ್ತಮೂಲಂ ಭುವನಾಙ್ಘ್ರಿಪೇನ್ದ್ರಮಹೀನ್ದ್ರಭೋಗೈರಧಿವೀತವಲ್ಕಮ್  ॥ ೨೯ ॥


 ಚರಾಚರೌಕೋ ಭಗವನ್ಮಹೀಧ್ರಮಹೀನ್ದ್ರಬನ್ಧುಂ ಸಲಿಲೋಪಗೂಢಮ್ ।

 ಕಿರೀಟಸಾಹಸ್ರಹಿರಣ್ಯಶೃಙ್ಗಮಾವಿರ್ಭವತ್ಕೌಸ್ತುಭರತ್ನಗರ್ಭಮ್ ॥ ೩೦ ॥


 ನಿವೀತಮಾಮ್ನಾಯಮಧುವ್ರತಾಶ್ರಯ  ಸ್ವಕೀರ್ತಿಮಯ್ಯಾ ವನಮಾಲಯಾ ಹರಿಮ್ ।

 ಸೂರ್ಯೇನ್ದುವಾಯ್ವಗ್ನ್ಯಗಮತ್ತ್ರಿಧಾಮಭಿಃ  ಪರಿಕ್ರಮತ್ಪ್ರಾಧನಿಕೈರ್ದುರಾಸದಮ್ ॥ ೩೧ ॥


 ತರ್ಹ್ಯೇವ ತನ್ನಾಭಿಸರಃಸರೋಜ ಆತ್ಮಾನಮಮ್ಭಃ ಶ್ವಸನಂ ವಿಯಚ್ಚ ।

 ದದರ್ಶ ದೇವೋ ಜಗತಾಂ ವಿಧಾತಾ ನಾತಃ ಪರಂ ಲೋಕವಿಸರ್ಗದೃಷ್ಟಿಃ ॥ ೩೨ ॥


 ಸ್ವಕರ್ಮಬೀಜಂ  ರಜಸೋಪರಕ್ತಃ ಪ್ರಜಾಃ ಸಿಸೃಕ್ಷನ್ನಿಯದೇವ ದೃಷ್ಟ್ವಾ ।

 ಅಸ್ತೌದ್ ವಿಸರ್ಗಾಭಿಮುಖಸ್ತಮೀಶ  ಮವ್ಯಕ್ತವರ್ತ್ಮನ್ಯಭಿವೇಶಿತಾತ್ಮಾ ॥ ೩೩ ॥


ತಾವರೆಯಂತಹ, ಬಯಸಿದ್ದನ್ನು ಕೊಡುವ ಪಾದಕಮಲ, ಅಲ್ಲಿ ಬೆರಳುಗಳೇ ದಳಗಳು. ಉಗುರು ಎನ್ನುವ ಚಂದ್ರನಿಂದ ಹೊರಟ ಬೆಳದಿಂಗಳ ಕಿರಣಗಳಿಂದ ಅಂಗುಲಿಗಳು  ವಿಲಕ್ಷಣವಾಗಿ ಕಾಣುತ್ತಿವೆ. [ಇಲ್ಲಿ ಭಿನ್ನ ಎಂದರೆ ವಿಲಕ್ಷಣ. ಭಗವಂತನ ಅಂಗ ಬೇರೆ, ಭಗವಂತ ಬೇರೆ ಅಲ್ಲ. ಭಿನ್ನಮನ್ಯೇಭ್ಯೋ ವಿಲಕ್ಷಣಮ್ ॥*॥] ಹೀಗೆ ಬೆಳ್ಳಗಿರುವ ಶೇಷನ ಮೈಯೆಂಬ ಮಂಚದಮೇಲೆ ಕುಳಿತ ಪರಮಾತ್ಮನ ಪಾದಪದ್ಮವೆಂಬ ಕಲ್ಪವೃಕ್ಷವನ್ನು ಚತುರ್ಮುಖ ಕಂಡ. ಶೇಷನ ಹೆಡೆಯನ್ನಲಂಕರಿಸಿದ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಕತ್ತಲನ್ನು ದೂರಮಾಡುವಾಗ ಚತುರ್ಮುಖನಿಗೆ ಭಗವಂತ ಕಂಡ. ಭಗವಂತ ನೀಲಿ ಬಣ್ಣದ ಬೆಟ್ಟದಂತೆ ಕಾಣುತ್ತಿದ್ದ. ಅವನು ಪೀತಾಮ್ಭಾರವನ್ನು ಧರಿಸಿದ್ದು, ಕಿರೀಟವನ್ನು ಧರಿಸಿದ್ದ. ಕೊರಳಲ್ಲಿ ವನಮಾಲೆಯನ್ನು ಧರಿಸಿದ್ದ.  ಅವನು ಕೈ ಅಗಲಿಸಿದರೆ ಎಷ್ಟು ಅಗಲವಿದ್ದನೋ ಅಷ್ಟೇ ಅವನ ಎತ್ತರವಿತ್ತು. ಎಲ್ಲರೂ ಬೇರೆಬೇರೆ ರೀತಿಯಿಂದ ಅವನನ್ನು ಪೂಜಿಸುತ್ತಿದ್ದರು. ಶ್ರೀಲಕ್ಷ್ಮಿ ಅವನನ್ನು ಆಶ್ರಯಿಸಿಕೊಂಡಿದ್ದಳು. [ಇಲ್ಲಿ ಬಟ್ಟೆ , ಕಿರೀಟ.. ಅರಳಿದ ಹೂ, ಇತ್ಯಾದಿ ಎಲ್ಲವೂ ಅಲೌಕಿಕ ಎಂದು ತಿಳಿಯಬೇಕು.]

ತೋಳ್ಬಂಧಿ, ಶ್ರೇಷ್ಠವಾದ ಬಳೆಗಳಿಂದ ಅಲಂಕರಿಸಿದ ಸಹಸ್ರಾರು ತೊಳುಗಳು. ಕೊರಳಲ್ಲಿ ಧರಿಸಿದ್ದ ವನಮಾಲೆ ತುಂಬೆಲ್ಲಾ ದುಂಬಿಗಳು, (ಪ್ರಳಯಕಾಲದಲ್ಲಿ ವೇದಮಾತೆ ಶ್ರೀಲಕ್ಷ್ಮಿ ಭಗವಂತನನ್ನು ಸ್ತೋತ್ರಮಾಡುತ್ತಿರುವಂತೆ, ಮೋಕ್ಷದಲ್ಲಿರುವ ಮುಕ್ತಜೀವರು ಭಗವಂತನನ್ನು ಸದಾ ಭೃಂಗರೂಪದಲ್ಲಿ ಸ್ತೋತ್ರಮಾಡುತ್ತಿರುತ್ತಾರೆ.) ಹೀಗೆ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠಗಳೆಂಬ ಮೂರು ಮನೆಯುಳ್ಳ,  ಎಂದೂ ಬಿಟ್ಟಿರದ ಮುಕ್ತರೊಂದಿಗಿರುವ ಭಗವಂತನನ್ನು ಚತುರ್ಮುಖ ಪಾದದಿಂದ ತಲೆಯತನಕ ನೋಡಿದ್ದಾನೆ. ಅಲ್ಲಿ ಹಿಂದಿನ ಕಲ್ಪದ(ಈಗಾಗಲೇ ಮೋಕ್ಷವನ್ನು ಸೇರಿರುವ) ಸೂರ್ಯನಿದ್ದ, ಚಂದ್ರ, ವಾಯು, ಪ್ರಾಣಾಗ್ನಿ, ಎಲ್ಲರೂ ಭಗವಂತನ ಪದಾತಿಗಳಾಗಿದ್ದರು.


 ಮೈತ್ರೇಯರು ವಿದುರನನ್ನು ಕುರಿತು ಹೇಳುತ್ತಾರೆ: ಧ್ಯಾನ ಮಾಡುವವರ ಸಮಸ್ತ ಬೇಗೆಗಳನ್ನು ಪರಿಹರಿಸುವ ಕೆಂದುಟಿಯ ಮುಗುಳ್ನಗೆ ಭಗವಂತನ ಮುಖದಲ್ಲಿತ್ತು. ಕರ್ಣಕುಂಡಲದಿಂದ ಅಲಂಕೃತನಾದ ಭಗವಂತನ ತುಟಿ, ನಾಸಿಕ ಹಾಗು ಹುಬ್ಬು ಸೊಗಸಿನಿಂದ ಕಣ್ಣು ಕೋರೈಸುವಂತಿತ್ತು. ಭಗವಂತನ ನಡುವು ಕದಂಬಪುಷ್ಪದ ಕೇಸರವನ್ನು ಹೋಲುವ ಪೀತಾಂಬರದಿಂದ ಆವೃತವಾಗಿತ್ತು. ಅವನ ವಕ್ಷಸ್ಥಲ ಶ್ರೀವತ್ಸಚಿಹ್ನೆ ಮತ್ತು ಕಂಠೀಹಾರದಿಂದ ಅಲಂಕೃತವಾಗಿತ್ತು.  

ಹೇಗೆ ಚಂದನ ವೃಕ್ಷವು ರೆಂಬೆಗಳಿಂದ, ಸುಗಂಧ ಪುಷ್ಪಗಳಿಂದ ಅಲಂಕೃತವಾಗಿರುತ್ತದೋ, ಹಾಗೇ ತೋಳ್ಬಂಧಿಗಳುಳ್ಳ ಸಾವಿರಾರು ತೋಳುಗಳಿಂದ ಕೂಡಿರುವ ಭಗವಂತನ ಶರೀರ ಅಲೌಕಿಕವಾದ ಮುತ್ತು-ರತ್ನಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು. ಚಂದನ ವೃಕ್ಷವು ಸರ್ಪಗಳಿಂದ ಆವೃತವಾಗಿರುವಂತೆಯೇ, ಭಗವಂತನ ಶರೀರ ಶೇಷನ ಹೆಡೆಗಳಿಂದ ಆಚ್ಛಾದಿತವಾಗಿತ್ತು. ಇಂತಹ ಭಗವಂತನು ಅವ್ಯಕ್ತಮೂಲ. ಅಂದರೆ ತ್ರಿಗುಣಾತ್ಮಕವಾದ ಪ್ರಕೃತಿಯ ಉತ್ಪತ್ತಿ ಕಾರಣ. [“ತಸ್ಮಾದವ್ಯಕ್ತಮುತ್ಪನ್ನಂ ತ್ರಿಗುಣಂ ದ್ವಿಜಸತ್ತಮ” -ಮೊಕ್ಷಧರ್ಮಪರ್ವ. ಪರಮಾತ್ಮನಿಂದ ತ್ರಿಗುಣಾತ್ಮಕವಾದ ಪ್ರಕೃತಿ ಸೃಷ್ಟಿಯಾಯಿತು ಎಂದು ಮೋಕ್ಷಧರ್ಮಪರ್ವದಲ್ಲಿ ಹೇಳಿದ್ದಾರೆ]

ಮಹಾಪರ್ವತದಂತೆ ಸಮಸ್ತ ಚರಾಚರ ಜೀವರಿಗೆ ನೆಲೆಯಾಗಿರುವ, ಸಾವಿರಾರು ಹೆಡೆಗಳ, ಸಾವಿರಾರು ಕಿರೀಟವನ್ನು ಧರಿಸಿರುವ ಶೇಷನ ಗೆಳೆಯನಾದ, ಆಘಾದವಾದ ಪರಮಾಣು ಸಮುದ್ರದಲ್ಲಿ ಮಲಗಿರುವ   ಭಗವಂತನನ್ನು ನಾವು ಚಿಂತಿಸಬೇಕು.

ಈ ಹಿಂದೆ ಹೇಳಿದಂತೆ ತ್ರಿಧಾಮನಾದ ಭಗವಂತನನ್ನು ಬಿಟ್ಟು ಎಂದೂ ಬೇರೆಡೆ ಹೋಗದ, ಮುಕ್ತರಾಗಿರುವ ಸೂರ್ಯ, ಚಂದ್ರ, ಅಗ್ನಿ, ವಾಯು, ಮುಂತಾದವರು ಅಂಗರಕ್ಷಕರಂತೆ ಭಗವಂತನ ಸುತ್ತಲೂ ಸಂಚರಿಸುತ್ತಿರುತ್ತಾರೆ. ಸೂರ್ಯೇಂದುವಾಯ್ವಗ್ನ್ಯಾದಿಭಿಸ್ತ್ರಿದಾಧಾಮ್ನೋ ವಿಷ್ಟೋರಗಚ್ಛದ್ಭಿಃ ಪ್ರಾಧನಿಕೈಃ  ।   ಈ ವಿವರಣೆಗೆ ಪೂರಕವಾಗಿ ಆಚಾರ್ಯರು ಬ್ರಹ್ಮಾಂಡ ಪುರಾಣದ ಪ್ರಮಾಣವಚನ ನೀಡಿರುವುದನ್ನು ನಾವು ಕಾಣಬಹುದು-

“ಮುಕ್ತವಾಯ್ವಾದಿಭಿರ್ವಿಷ್ಣುಂ ವೃತಂ ಬ್ರಹ್ಮಾ ದದರ್ಶ ಹ । ತದನ್ಯಾಭಾವತೋ ನಾನ್ಯದತಸ್ತತ್ ಸ್ರಷ್ಟುಮೈಚ್ಛತ”

ಇತಿ ಬ್ರಹ್ಮಾ ಣ್ಡೇ  ॥ * ॥ ಚತುರ್ಮುಖ-ಬ್ರಹ್ಮ ಅಲ್ಲಿ  ಮುಕ್ತರಾದ ವಾಯು ಮುಂತಾದವರನ್ನು ಕಂಡು, ಅದೇ ಮಾದರಿಯಲ್ಲಿ, ತನಗೆ ತಿಳಿಯದ ದಾರಿಯಲ್ಲಿ (ಪ್ರಕೃತಿಮಾತೆ ಶ್ರೀಲಕ್ಷಿಯಲ್ಲಿ) ತನ್ನ ಮನಸ್ಸನ್ನು ಇಟ್ಟು, ಸೃಷ್ಟಿ ಮಾಡಲು ತೊಡಗಿದ. 



॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ನವಮೋSಧ್ಯಾಯಃ ॥


Sunday, March 2, 2025

Shrimad BhAgavata in Kannada -Skandha-03-Ch-09_01

 ನವಮೋSಧ್ಯಾಯಃ

ಚತುರ್ಮುಖ ಬ್ರಹ್ಮನ ಅವತರಣ

ಯಾವ ರೀತಿ ಈ ಪ್ರಪಂಚ ಸೃಷ್ಟಿಯಾಗಿ ವಿಸ್ತಾರಗೊಂಡಿತು? ಪ್ರಾಣಿಗಳು, ಮನುಷ್ಯರು, ದೇವತೆಗಳು, ವನಸ್ಪತಿಗಳು, ಹೀಗೆ ಇತ್ಯಾದಿ, ಎಲ್ಲವೂ ಹೇಗೆ ಸೃಷ್ಟಿಯಾಯಿತು ಎನ್ನುವುದು ಪ್ರಶ್ನೆ. 

ಕಾಲ ಅನಾದಿನಿತ್ಯ. ಆದರೆ ಕಾಲದ ವಿಭಾಗ ಅನಿತ್ಯ. ಪ್ರಳಯಕಾಲದಲ್ಲಿ ಕಾಲದ ವಿಭಾಗವಿರಲಿಲ್ಲ. ಆಗ ಸೂರ್ಯ-ಚಂದ್ರರಿರರಿಲ್ಲ, ಹಗಲು-ರಾತ್ರಿಗಳಿರಲಿಲ್ಲ. ಭಗವಂತನ ಸೃಷ್ಟಿಯಲ್ಲಿ ಕಾಲದ ವಿಭಾಗ ಸೃಷ್ಟಿಯಾಯಿತು. ಕಾಲದಲ್ಲಿ ಅತ್ಯಂತ ಸೂಕ್ಷ್ಮ ಕಾಲ ಎಂದರೆ ಅದು ಪರಮಾಣು ಕಾಲ ಮತ್ತು ಅತ್ತ್ಯಂತ ದೊಡ್ಡದು ಬ್ರಹ್ಮಕಲ್ಪ.

ಇಲ್ಲಿ ಮೈತ್ರೇಯರು ವಿದುರನ ಪ್ರಶ್ನೆಗೆ ಉತ್ತರಿಸುತ್ತಾ, ಸೃಷ್ಟಿಯ ರೋಚಕ ವಿಷಯಗಳನ್ನು ಹಂತಹಂತವಾಗಿ  ಹೇಳುವುದನ್ನು ಕಾಣಬಹುದು. ಅದಕ್ಕೆ ಪೀಠಿಕೆಯಾಗಿ ಮೊಟ್ಟಮೊದಲು ನಾವು ತಿಳಿಯಬೇಕಾಗಿರುವುದು ಚತುರ್ಮುಖ ಬ್ರಹ್ಮನ ಆಯುಸ್ಸು ಮುಗಿದಾಗ ನಡೆಯುವ ಮಹಾಪ್ರಳಯ. ಬ್ರಹ್ಮನಿಗೆ ನೂರು ವರ್ಷವಾದಾಗ ಇಡೀ ಬ್ರಹ್ಮಾಂಡ ನಾಶವಾಗುತ್ತದೆ. ನಂತರ ಅಷ್ಟೇ ಕಾಲ ಮಹಾಪ್ರಳಯಕಾಲವಾಗಿದ್ದು, ಮತ್ತೆ ಮರುಸೃಷ್ಟಿಯಾಗುತ್ತದೆ. ಆ ರೀತಿ ಸೃಷ್ಟಿಯಾಗುವಾಗ ಚತುರ್ಮುಖ ಬ್ರಹ್ಮ ಭಗವಂತನ ನಾಭೀಕಮಲದಲ್ಲಿ ಸೃಷ್ಟಿಸಲ್ಪಡುತ್ತಾನೆ. ಪ್ರತೀ ಬ್ರಹ್ಮಕಲ್ಪದಲ್ಲಿ ಭಗವಂತನ ನಾಭೀಕಮಲದಲ್ಲಿ ಚತುರ್ಮುಖ ಸೃಷ್ಟಿಯಾಗುವ ಕಾಲವನ್ನು ಪಾದ್ಮಕಲ್ಪ ಎನ್ನುತ್ತಾರೆ.

ಪ್ರಳಯದಲ್ಲಿ ಮೂರು ವಿಧ. ಮೊದಲನೆಯದು ಮನ್ವಂತರ ಪ್ರಳಯ. ಒಂದು ಮನ್ವಂತರ ಎಂದರೆ 30ಕೋಟಿ, 85 ಲಕ್ಷ, 70 ಸಾವಿರ ವರ್ಷಗಳು. ಇಂತಹ ಒಂದು ಮನ್ವಂತರ ಮುಗಿದಾಗ ಒಂದು ಪ್ರಳಯವಾಗುತ್ತದೆ. ಆಗ ಭೂಮಿಯ ಬಹುಭಾಗ ನಾಶವಾಗುತ್ತದೆ, ಆದರೆ ಇತರ ಲೋಕಗಳು ನಾಶವಾಗುವುದಿಲ್ಲ.  ಎರಡನೇಯದು ದಿನಕಲ್ಪ ಪ್ರಳಯ. ಚತುರ್ಮುಖನ ಒಂದು ಹಗಲು ಎಂದರೆ ನಮ್ಮ 432 ಕೋಟಿ ಮಾನವ ವರ್ಷಗಳು. ಈ 432 ಕೋಟಿ ವರ್ಷಗಳು ಮುಗಿದಮೇಲೆ ಮತ್ತೆ 432 ಕೋಟಿ ವರ್ಷಗಳು ಚತುರ್ಮುಖನ ಒಂದು ರಾತ್ರಿ. ಅದೇ ದಿನಪ್ರಳಯ. ಚತುರ್ಮುಖನ ಒಂದು ಹಗಲಿನಲ್ಲಿ (432 ಕೋಟಿ ಮಾನವ ವರ್ಷಗಳಲ್ಲಿ) 14 ಮನ್ವಂತರಗಳಿವೆ. ಒಂದೊಂದು ಮನ್ವಂತರದ ಕಾಲ 30 ಕೋಟಿ 45 ಲಕ್ಷ 70 ಸಾವಿರ ವರ್ಷಗಳು. ಹಾಗಾಗಿ 14 ಮನ್ವಂತರಗಳ ಒಟ್ಟು ಕಾಲ 431 ಕೋಟಿ 99 ಲಕ್ಷ 80 ಸಾವಿರ ವರ್ಷಗಳು. ಮನ್ವಂತರಗಳ ನಡುವಿನ ಒಟ್ಟು ಪ್ರಳಯಕಾಲ 20 ಸಾವಿರ ವರ್ಷಗಳು. ಈ ಇಪ್ಪತ್ತು ಸಾವಿರ ವರ್ಷಗಳಲ್ಲಿ ಮೊದಲನೇ ಮನ್ವಂತರದ ನಂತರ ನಡೆಯುವ ಪ್ರಳಯ 2000 ವರ್ಷಗಳ ಪ್ರಳಯ. ಉಳಿದ ಮನ್ವಂತರಗಳ ನಡುವಿನ ಪ್ರಳಯ 1500 ವರ್ಷಗಳ ಪ್ರಳಯ. ಕೊನೇಯ ಮನ್ವಂತರದ ನಂತರ ಮಹಾಪ್ರಳಯ. (2000+1500x12=20000 ಮಾನವ ವರ್ಷಗಳು). 

ನಾಕು ಯುಗಗಳು ಎಂದರೆ 43 ಲಕ್ಷ 20 ಸಾವಿರ ವರ್ಷಗಳು. ನಾಲ್ಕು ಯುಗಗಳ 1000 ಆವೃತ್ತಿ ಬ್ರಹ್ಮನ ಒಂದು ಹಗಲು(ನಮ್ಮ 432 ಕೋಟಿ ವರ್ಷಗಳು. ಇದು ಚತುರ್ಮುಖನ 12 ಗಂಟೆ). ಚತುರ್ಮುಖನ ಒಂದು ದಿನ(24 ಗಂಟೆ) ಎಂದರೆ 864 ಕೋಟಿ ಮಾನವ ವರ್ಷಗಳು. ಚತುರ್ಮುಖನ ಆಯಸ್ಸು(100 ವರ್ಷ) ಎಂದರೆ ನಮ್ಮ 31,104 ಸಾವಿರ ಕೋಟಿ ಮಾನವ ವರ್ಷಗಳು. ಆನಂತರ ಅಷ್ಟೇ ಕಾಲ ಮಹಾಪ್ರಳಯ. ಇವೆಲ್ಲವೂ ಭಗವಂತನಿಗೆ ಒಂದು ಕ್ಷಣವೂ ಅಲ್ಲ!

ಈ ಮಹಾಪ್ರಳಯದ ನಂತರ ನಡೆಯುವ ಸೃಷ್ಟಿ ಚತುರ್ಮುಖನ ಸೃಷ್ಟಿಯೊಂದಿಗೆ ಆರಂಭವಾಗುತ್ತದೆ. ಅದೇ ಪಾದ್ಮಕಲ್ಪ. ಪ್ರಳಯಕಾಲದಲ್ಲಿ ಎಲ್ಲವೂ ಭಗವಂತನ ಉದರದೊಳಗಿದ್ದು, ಅದು ಪಾದ್ಮಕಲ್ಪದಲ್ಲಿ ಬ್ರಹ್ಮಾಂಡಕಮಲ ರೂಪದಲ್ಲಿ ಹೊರಗೆ ಚಿಮ್ಮಿ ಅದರಲ್ಲಿ ಚತುರ್ಮುಖ ಹೊರ ಬರುತ್ತಾನೆ.  ಭಗವಂತನ ಉದರದಿಂದ ಪದ್ಮ ಹೊರಬರುವುದು, ಅದರಲ್ಲಿ ಚತುರ್ಮುಖ ಉತ್ಪನ್ನನಾಗುವುದು, ಇದರ ಪರಿಕಲ್ಪನೆಯ ಸ್ಪಷ್ಟಚಿತ್ರಣದ ಅಪೂರ್ವ ಸಂಗತಿಯನ್ನು ಮೈತ್ರೇಯರು ವಿದುರನ ಮುಖೇನ ಲೋಕಕ್ಕೆ ನೀಡಿದ್ದಾರೆ.      


ಸೋSಹಂ ನೃಣಾಂ ಕ್ಷುಲ್ಲಸುಖಾಯ ದುಃಖಂ ಮಹದ್ ಗತಾನಾಂ ವಿರಮಾಯ ತುಭ್ಯಮ್ । 

ಪ್ರವರ್ತಯೇ ಭಾಗವತಂ ಪುರಾಣಂ ಯದಾಹ ಸಾಕ್ಷಾದ್ ಭಗವಾನ್ ಋಷಿಭ್ಯಃ ॥೦೨॥


ಮೈತ್ರೇಯರು ಹೇಳುತ್ತಾರೆ-

ನಾನು ನಿನಗೋಸ್ಕರ ಮನುಕುಲಕ್ಕೆ ಈ ಜ್ಞಾನವನ್ನು ನೀಡುತ್ತಿದ್ದೇನೆ. ಲೋಕದಲ್ಲಿನ ಮನುಜರ ಪಾಡು ನೋಡಿದರೆ ಅಯ್ಯೋಪಾಪ ಎನಿಸುತ್ತದೆ. ನಗಣ್ಯವಾದ ಒಂದು ಕ್ಷಣದ ಆನಂದದ ಬೆನ್ನುಹತ್ತಿ ಇಡೀ ಜೀವನವನ್ನೇ ಬಲಿಕೊಡುವ ಅಂತಹ ಜನರ ಏಳಿಗೆಗಾಗಿ, ಭಗವಂತನೇ ಹೇಳಿದ, ಭಗವಂತನ ಬಗೆಗೆ ಇದ್ದ ಅತ್ಯಂತ ಪ್ರಾಚೀನವಾದ ಅಧ್ಯಾತ್ಮವನ್ನು ನಾನು ನಿನಗೆ ಹೇಳುತ್ತೇನೆ.


ಆಸೀನಮುರ್ವ್ಯಾಂ ಭಗವಂತಮಾದ್ಯಂ ಸಙ್ಕರ್ಷಣಂ ದೇವಮಕುಣ್ಠಸತ್ವಮ್ ।

ವಿವಿತ್ಸವಸ್ತತ್ತ್ವಮತಃ ಪರಸ್ಯ ಕುಮಾರಮುಖ್ಯಾ ಮುನಯೋSನ್ವಪೃಚ್ಛನ್ ॥೦೩॥


ಸ್ವಮೇವ ಧಿಷ್ಣ್ಯಂ ಬಹು ಮಾನಯನ್ತಂ ಯಂ ವಾಸುದೇವಾಭಿಧಮಾಮನನ್ತಿ ।

ಪ್ರತ್ಯಗ್ಧೃತಾಕ್ಷಾಮ್ಬುಜಕೋಶಮೀಷದುನ್ಮೀಲಯನ್ತಂ ವಿಬುಧೋದಯಾಯ ॥೦೪॥


ಸೃಷ್ಟಿಯ ಆದಿಯಲ್ಲಿ ಚತುರ್ಮುಖ ಸನಕಾದಿಗಳನ್ನು(ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರರನ್ನು ) ಸೃಷ್ಟಿಮಾಡಿದ. ಇವರಲ್ಲಿ ಸನತ್ಕುಮಾರ ಜ್ಞಾನದಲ್ಲಿ ಬಹಳ ಎತ್ತರದಲ್ಲಿದ್ದವನು. (ಈತ ಬೇರೆ ಯಾರೂ ಅಲ್ಲ. ದೇವರ ಮಗನಾಗಿ ಕಾಮ, ಬ್ರಹ್ಮನ ಮಗನಾಗಿ ಸನತ್ಕುಮಾರ, ರುದ್ರನ ಮಗನಾಗಿ ಷಣ್ಮುಖ. ಇವನೇ ಸ್ಕಂಧ, ಸುಬ್ರಮಣ್ಯ, ಪ್ರದ್ಯುಮ್ನ, ಸಾಂಬ, ಇತ್ಯಾದಿ.  ಶೇಷ ಮತ್ತು ಸ್ಕಂಧನಿಗೆ ಅವಿನಾಭಾವ ಸಂಬಂಧ. ಇವರಿಬ್ಬರನ್ನು  ಬಲರಾಮ-ಪ್ರದ್ಯುಮ್ನ ರೂಪದಲ್ಲಿ ಮಹಾಭಾರತದಲ್ಲಿ ಕಾಣುತ್ತೇವೆ. ಹೀಗಾಗಿ ನಮ್ಮಲ್ಲಿ ಹೆಚ್ಚಾಗಿ ಶೇಷ ಮತ್ತು ಸುಬ್ರಮಣ್ಯ ಒಟ್ಟಿಗಿರುವ ದೇವಸ್ಥಾನಗಳನ್ನು ಕಾಣುತ್ತೇವೆ). ಆತ ತನ್ನ ಮೂರುಮಂದಿ ಸಹೋದರರೊಂದಿಗೆ ಸಂಕರ್ಷಣನ (ಶೇಷನ) ಬಳಿಗೆ ಹೋದ.  ಈ ಸಂದರ್ಭದಲ್ಲಿ ಸಂಕರ್ಷಣರೂಪಿ ಸಾಕ್ಷಾತ್ ಭಗವಂತ ಶೇಷದೇವರಲ್ಲಿ ಸನ್ನಿಹಿತನಾಗಿ ಸನಕಾದಿಗಳಿಗೆ ಉಪದೇಶಿಸಿದ. ಆ ಪ್ರಾಚೀನ ಅಧ್ಯಾತ್ಮ ವಿದ್ಯೆಯನ್ನೇ ನಾನು ನಿನಗೆ ಹೇಳುತ್ತೇನೆ  ಎಂದು ಇಲ್ಲಿ ಮೈತ್ರೇಯರು ವಿದುರನಿಗೆ ಹೇಳುತ್ತಾರೆ.

ಸನಕಾದಿಗಳು ಶೇಷನಲ್ಲಿಗೆ ಹೋದಾಗ ಶೇಷ ತನ್ನ ನಾಸಾಗ್ರದಲ್ಲಿ ಕಣ್ಣಿಟ್ಟು(ಅರೆಮುಚ್ಚಿದ ಕಣ್ಣುಗಳಿಂದ) ತನಗೆ ಆಶ್ರಯದಾತನಾದ, ಮೋಕ್ಷಪ್ರದ ವಾಸುದೇವನನ್ನು ಸ್ಮರಿಸುತ್ತಾ (ಧ್ಯಾನಮಗ್ನನಾಗಿ) ಕುಳಿತಿದ್ದ. ಈರೀತಿ ತನ್ನ ಅರೆ ತೆರೆದ ತಾವರೆಯ ಮೊಗ್ಗಿನಂತಹ ಕಣ್ಣುಗಳಲ್ಲಿ ಭಗವಂತನ ಧ್ಯಾನಮಾಡುತ್ತಿರುವ ಸಂಕರ್ಷಣನಲ್ಲಿ ಸನಕಾದಿಗಳು ತತ್ವೋಪದೇಶ ಮಾಡಬೇಕು ಎಂದು ಬೇಡಿಕೊಂಡರು.

ಇಲ್ಲಿ ‘ಧಿಷ್ಣ್ಯಮ್’ ಎನ್ನುವ ಪದಕ್ಕೆ ‘ಆಶ್ರಯ’ ಎಂಬ ಅರ್ಥವನ್ನು  ಆಚಾರ್ಯರು ಅಭಿಧಾನ ಎನ್ನುವ ಕೋಶದ ಆಧಾರದೊಂದಿಗೆ ವಿವರಿಸಿರುವುದನ್ನು ಕಾಣಬಹುದು.  “ಆಧಾರ ಆಶ್ರಯೋ ಧಿಷ್ಣ್ಯಂ ನಿಧಾನಂ ಚಾಭಿಧೀಯತೇ”  ಇತ್ಯಭಿಧಾನೇ  ॥*॥

ಹೀಗೆ ಜ್ಞಾನದ ವಿಕಾಸಕ್ಕಾಗಿ ಶೇಷನಿಂದ ಉಪದೇಶಪಡೆದ ಸನತ್ಕುಮಾರರು ಅದನ್ನು ಸನ್ಯಾಸಿಗಳಲ್ಲೇ ಅಗ್ರಗಣ್ಯರಾದ  ಸಾಂಖ್ಯಾಯನರಿಗೆ ಕೊಟ್ಟರು. ಸಾಂಖ್ಯಾಯನರು ಅದನ್ನು ವೇದವ್ಯಾಸರ ತಂದೆಯಾದ ಪರಾಶರರಿಗೆ ಮತ್ತು ಬೃಹಸ್ಪತಿಗೆ  ಉಪದೇಶಿಸಿದರು. ಆ ಪರಾಶರರಿಂದ ಮೈತ್ರೇಯರಿಗೆ ಈ ಜ್ಞಾನ ಹರಿದುಬಂತು. (ಮೈತ್ರೇಯರು ಮತ್ತು ವೇದವ್ಯಾಸರು ಪರಾಶರರ ಶಿಷ್ಯರು ಮತ್ತು ಸಹಪಾಠಿಗಳು). ಈರೀತಿ ಹರಿದುಬಂದ ಜ್ಞಾನವನ್ನು ಇಲ್ಲಿ ಮೈತ್ರೇಯರು ವಿದುರನ ಮುಖೇನ ನಮಗೆ ವಿವರಿಸಿದ್ದಾರೆ. 


 ತಸ್ಯಾSತ್ಮಸೂಕ್ಷ್ಮಾಭಿನಿವಿಷ್ಟದೃಷ್ಟೇರನ್ತರ್ಗತೋSರ್ಥೋ ರಜಸಾ ತನೀಯಾನ್ ।

ಗುಣೇನ ಕಾಲಾನುಗತೇನ ವಿದ್ಧಃ  ಶೂಷ್ಯಂಸ್ತದಾSಭಿದ್ಯತ ನಾಭಿದೇಶಾತ್ ॥೧೩॥


ಸ ಪದ್ಮಕೋಶಃ ಸಹಸೋದತಿಷ್ಠತ್ ಕಾಲೇನ ಕರ್ಮಪ್ರತಿಬೋಧೀನೇನ  । 

ಸ್ವರೋಚಿಷಾ ತತ್ ಸಲಿಲಂ ವಿಶಾಲಂ ವಿದ್ಯೋತಯನ್ನರ್ಕ ಇವಾSತ್ಮಯೋನಿಃ ॥೧೪॥ 


ತಲ್ಲೋಕಪದ್ಮಂ ಸ ಉ ಏವ ವಿಷ್ಣುಃ  ಪ್ರಾವೀವಿಶತ್ ಸರ್ವಗುಣಾವಭಾಸಮ್ ।

ತಸ್ಮಿನ್ ಸ್ವಯಂ ವೇದಮಯೋ ವಿಧಾತಾ ಸ್ವಯಮ್ಭುವಂ ಯಂ  ಪ್ರವವದನ್ತಿ  ಸೋSಭೂತ್ ॥೧೫॥ 

 

ಈ ಹಿಂದೆ ಹೇಳಿದಂತೆ ಮಹಾಪ್ರಳಯದಲ್ಲಿ ಎಲ್ಲವೂ ನಾಶವಾಗುತ್ತದೆ. ಇದಕ್ಕೆ ಚತುರ್ಮುಖನೂ ಕೂಡಾ ಹೊರತಲ್ಲ. “ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್”(ಈಶಾವಾಸ್ಯ ಉಪನಿಷತ್ತು).  ಬ್ರಹ್ಮದೇವರ ಶರೀರವೂ ಕೂಡಾ ಮಹಾಪ್ರಳಯದಲ್ಲಿ ನಾಶವಾಗಲೇಬೇಕು. ಪ್ರಳಯಕಾಲದಲ್ಲಿ ಭಗವಂತನ ಉದರದಲ್ಲಿ ಸಮಸ್ತ ವಿಶ್ವ ಸೂಕ್ಷ್ಮರೂಪದಲ್ಲಿತ್ತು. ಎಲ್ಲವೂ ನಿಷ್ಕ್ರೀಯವಾಗಿತ್ತು. 

ಈ ಕಾಲದಲ್ಲಿ ಯೋಗನಿದ್ರೆಯಲ್ಲಿ ಒಬ್ಬನಿದ್ದ. ಕಾಲ ಬರಲೀ ಎಂದು ಅವನು ಕಾದಿದ್ದ. ಅಘಾದವಾದ ಆಕಾಶದಲ್ಲಿ ಕಟ್ಟಿಗೆಯಲ್ಲಿ ಅಡಗಿರುವ ಬೆಂಕಿಯಂತೆ ಅವನಿದ್ದ. ಕಾಲ ಬಂದಾಗ ಅವನು ಈ ಭೂತಸೂಕ್ಷ್ಮಗಳಿಗಾಗಿ ಸೃಷ್ಟಿ ಮಾಡಬೇಕೆಂದುಕೊಂಡ. ಸೂಕ್ಷ್ಮರೂಪದಲ್ಲಿದ್ದ ಎಲ್ಲವುಕ್ಕೂ ಒಂದು ರೂಪ ಕೊಡಬೇಕೆಂದು ರಜೋಗುಣವನ್ನು ಪ್ರಯೋಗಮಾಡಿದ. ಆಗ ರಜೋಗುಣದಿಂದ ಕೂಡಿಕೊಂಡು ಕಂಪಿಸಿ ಗಾಳಿ ಬೀಸಿತು. ಆಗ ಅವನ ಹೊಕ್ಕುಳಿನಿಂದ ತಾವರೆ ಅರಳಿತು. 

ಹೀಗೆ ತನ್ನದೇ ನಿಯಮಕ್ಕೆ ಬದ್ಧನಾಗಿರುವ ಭಗವಂತನಿಗೆ ಪ್ರಳಯಕಾಲ ಮುಗಿಯುತ್ತಿದ್ದಂತೆ ತನ್ನೊಳಗಿರುವ ಆತ್ಮಸೂಕ್ಷ್ಮಗಳಿಗಾಗಿ ಸೃಷ್ಟಿ ಮಾಡಬೇಕು ಎನ್ನುವ ಇಚ್ಛೆಯಾಗಿ ರಜೋಗುಣದಲ್ಲಿ ಕಂಪನ ಉಂಟುಮಾಡಿದ.  ಆಗಲೇ ಭಗವಂತನ ನಾಭಿಯಿಂದ ದ್ರವರೂಪವೊಂದು ಚಿಮ್ಮಿತು. ಅದು ರಜೋಗುಣದ ಕಂಪನದಿಂದ ಉಂಟಾದ ಗಾಳಿಗೆ ಒಣಗಿ ಘನಭಾವವನ್ನು ಹೊಂದಿ ಕಮಲದಮೊಗ್ಗಿನಂತೆ (ಬಂಗಾರದ ಮೊಟ್ಟೆಯಂತೆ) ಕಾಣಿಸಿಕೊಂಡಿತು. ಅದು ತಕ್ಷಣ ವಿಕಸಿತಗೊಂಡು ಇಡೀ ಬ್ರಹ್ಮಾಂಡವಾಗಿ ರೂಪುಗೊಂಡಿತು. “ಉದಕಂ ವಾಯುನಾ ಶುಷ್ಕಂ ಭಿನ್ನಂ ಪದ್ಮಮಭೂದ್ಧರೇಃ” ಇತಿ ಪಾದ್ಮೇ   ॥*॥ 

ಈ ಮೊದಲೇ ನೋಡಿದಂತೆ, ಸ್ವತಂತ್ರನಾದ ಭಗವಂತನು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದ್ದಾನೆ. ಈ  ಸಮಯರೇಖೆಯನುಸಾರ, ಪ್ರಳಯಕಾಲ ಮುಗಿಯುತ್ತಿದ್ದಂತೆ, ಬ್ರಹ್ಮಾಂಡವು ರೂಪುಗೊಳ್ಳಲು ಪ್ರಾರಂಭವಾಯಿತು. ಈ ಬ್ರಹ್ಮಾಂಡದ ಸೃಷ್ಟಿಯು ಸೂಚಿಸುವುದೇನೆಂದರೆ, ಈ ಸಮಯದಲ್ಲಿ ಪ್ರತಿಯೊಂದು ಜೀವಿಯೊಳಗಿರುವ ಕರ್ಮ ಜಾಗೃತವಾಗುತ್ತದೆ. ಈ ಕರ್ಮಕ್ಕನುಗುಣವಾಗಿ, ಭಗವಂತನು ಜೀವರ ಕರ್ಮಕ್ಷೇತ್ರವಾಗಿ  ಬ್ರಹ್ಮಾಂಡವನ್ನು ರಚಿಸಿದನು.

ಹೀಗೆ, ಸೂಕ್ಷ್ಮರೂಪದ ಪ್ರಕೃತಿಯ ವಿಶಾಲವಾದ ಸೂಕ್ಷ್ಮನೀರಿನ ವ್ಯಾಪ್ತಿಯಲ್ಲಿ, ಒಂದು ಕಮಲವು ಅಗಾಧವಾದ ಆ ನೀರಿನ ಮಧ್ಯೆ ತೇಲುತ್ತಿತ್ತು. ಸೂರ್ಯೋದಯದ ಬೆಳಕಿನಲ್ಲಿ ಹೇಗೆ ಬೆಳಕು ತುಂಬುತ್ತದೋ, ಹಾಗೆಯೇ ಭಗವಂತನ ಇಚ್ಛೆಯಿಂದ ಸಮಸ್ತ ಪ್ರಳಯಜಲವು ಪ್ರಕಾಶಿತವಾಯಿತು. ಕಣ್ಣಿಗೆ ಕಾಣದ ಅಖಂಡ ಮೂಲಪ್ರಕೃತಿಯ ಸಮುದ್ರದಲ್ಲಿ, ಸೂರ್ಯನಂತೆ ಪ್ರಕಾಶಮಾನವಾದ ಕಮಲವು ಅರಳಿತು. ಈ ಕಮಲದಲ್ಲಿ ಇನ್ನೂ ಚತುರ್ಮುಖ ಜನಿಸಬೇಕಿದೆ. ಈ ಕಮಲವೇ ಚತುರ್ದಶ ಭುವನಗಳಾಗಿ ರೂಪುಗೊಳ್ಳುವುದು. ಈ ಕಮಲದೊಳಗೆ, ಯಾವ ವಿಷ್ಣುವಿನ ನಾಭಿಯಿಂದ ಕಮಲವು ಚಿಮ್ಮಿತೋ, ಅದೇ ವಿಷ್ಣು ಪ್ರವೇಶಿಸಿ ಅದರಲ್ಲಿ ಸನ್ನಿಹಿತನಾದ.

“ವಿಷತೀತಿ ವಿಷ್ಣುಃ” ಎಂಬಂತೆ, ಯಾರು ಒಳಗೆ ಸನ್ನಿಹಿತನಾಗಿ ರಕ್ಷಣೆ ಮಾಡುತ್ತಾನೋ ಅವನೇ ‘ವಿಷ್ಣು’. ಇಂತಹ ವಿಷ್ಣು ಬ್ರಹ್ಮಾಂಡವೆಂಬ ಕಮಲದಲ್ಲಿ ಸನ್ನಿಹಿತನಾದಾಗ, ಆ ಕಮಲದಲ್ಲಿ ಒಂದು ಚೇತನ ಉದ್ಭವಿಸಿತು. (“ಆತ್ಮಾ ವಿಷ್ಣುರಸ್ಯ ಯೋನಿಃ” ॥*॥ ) ಅದೇ ಚತುರ್ಮುಖ. ಯಾರು ಜೀವರೆಲ್ಲರ ಪ್ರಧಾನ ಜೀವನೋ (ಸ್ವಯಂಭುಃ), ಅಂತಹ ಚತುರ್ಮುಖನ ಸೃಷ್ಟಿ ವಿಷ್ಣುವಿನಿಂದ ಈ ಬ್ರಹ್ಮಾಂಡವೆಂಬ ಕಮಲದಲ್ಲಿ ನಡೆಯಿತು. 

ಹೀಗೆ ಹುಟ್ಟದವನ(ಅಜಃ) ಹೊಕ್ಕುಳಲ್ಲಿ ಸಮಸ್ತ ಲೋಕಗಳೂ ಅಡಗಿರುವ ಕಮಲದ ಮೊಗ್ಗಿನಂತಿರುವ ಬ್ರಹ್ಮಾಂಡ ಹುಟ್ಟಿತು.  ಈ ವಿವರವನ್ನು ಋಗ್ವೇದದಲ್ಲಿ ಹೇಳಿರುವುದನ್ನು ಕಾಣಬಹುದು: “ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾ ಭುವನಾನಿ ತಸ್ಥುಃ” ॥೧೦.೮೨.೦೬॥ . ಈ ವೇದಮಂತ್ರದ ವಿವರಣೆ ಸ್ಕಾಂದಪುರಾಣದಲ್ಲಿ ಬಂದಿದೆ – “ಅಜಸ್ಯ ನಾಭಾವಿತಿ ಯಸ್ಯ ನಾಭೇರಭೂಚ್ಛ್ರುತೇಃ ಪುಷ್ಕರಂ ಲೋಕಸಾರಮ್ । ತಸ್ಮೈ ನಮೋ ವ್ಯಸ್ತಸಮಸ್ತವಿಶ್ವವಿಭೂತಯೇ ವಿಷ್ಣವೇ ಲೋಕಕರ್ತ್ರೇ”.   ‘ಅಜಸ್ಯ ನಾಭೌ' ಎಂದು ಶ್ರುತಿಯಲ್ಲಿ ಹೇಳಿದಂತೆ, ಯಾರ ನಾಭಿಯಿಂದ ಹದಿನಾಲ್ಕು ಲೋಕಗಳಿಗೆ ಆಶ್ರಯವಾದ ಕಮಲವು ಹುಟ್ಟಿತೋ, ಅಂತಹ ಜೀವಜಡಗಳ ಸೃಷ್ಟಿಗೆ ಕಾರಣನಾದ, ಜಗತ್ತಿಗೆ ಸ್ವಾಮಿಯಾದ ವಿಷ್ಣುವಿಗೆ ನಮಸ್ಕಾರವು ಎಂದಿದೆ ಸ್ಕಾಂಧಪುರಾಣ. ಈ ಲೋಕಪದ್ಮವೇ ಮುಂದೆ ವಿಭಾಗಗೊಂಡು ಚತುರ್ದಶ ಭುವನ ಬ್ರಹ್ಮಾಂಡವಾಗುತ್ತದೆ.

ಹೀಗೆ, ಹೊಕ್ಕುಳಿನಿಂದ ಹೊರಬಂದ, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಎಂಬ ಐದು (ಸರ್ವ)ಗುಣಗಳನ್ನು ಹೊಂದಿರುವ(ಪಂಚಭೂತಗಳ ಗುಣವನ್ನು ಹೊಂದಿರುವ) ಬ್ರಹ್ಮಾಂಡದ ಒಳಗೆ ಭಗವಂತನು ಅಂತರ್ಯಾಮಿಯಾಗಿ ಪ್ರವೇಶಿಸಿದನು. ಆಗ, ಆ ನಾಭೀಕಮಲದಲ್ಲಿ ಮುಂದೆ ಸೃಷ್ಟಿಕಾರ್ಯವನ್ನು ನಿರ್ವಹಿಸುವ (ವಿಧಾತ) ಒಂದು ಚೇತನ ಹುಟ್ಟಿಕೊಂಡಿತು. ಅವನೇ ವೇದಗಳನ್ನು ಚೆನ್ನಾಗಿ ತಿಳಿದಿರುವ(ವೇದಗರ್ಭ), ಹಿತವೂ ರಮಣೀಯವೂ ಆದ ಭಗವಂತನನ್ನು ಸದಾ ತನ್ನೊಳಗೆ ತುಂಬಿಕೊಂಡಿರುವ (ಹಿರಣ್ಯಗರ್ಭ) ಬ್ರಹ್ಮ. 

ಇಲ್ಲಿ ಹೇಳಿರುವ ಸ್ವಯಮ್ಭುಃ ಎಂದರೆ ಚತುರ್ಮುಖ ಬ್ರಹ್ಮ ಎನ್ನುವುದಕ್ಕೆ ಪ್ರಮಾಣವನ್ನು ಆಚಾರ್ಯರು ನೀಡಿದ್ದಾರೆ.

“ಪದ್ಮಸಂಸ್ಥಾದ್ದರೇಸ್ತತ್ರ ಬ್ರಹ್ಮಾSಜನಿ ಚತುರ್ಮುಖಃ”   ಇತಿ ಚ । 

ಸರ್ವಗುಣಾವಭಾಸಂ ಪೃಥಿವ್ಯಾತ್ಮಕಮ್ ।  ಪೃಥಿವ್ಯಾಂ ಹಿ ಶಬ್ದಾದಯಃ ಸರ್ವೇSವಭಾಸ್ಯನ್ತೇ  ।

“ತಸ್ಯಾSಸನವಿಧಾನಾರ್ಥ ಪೃಥಿವೀ ಪದ್ಮಮುಚ್ಯತೇ”  ಇತಿ ಚ ಮೋಕ್ಷಧರ್ಮಷು  ।

ಪದ್ಮ ಎಂದರೆ ಎಲ್ಲಾ ಲೋಕಗಳು. ವಿಶೇಷವಾಗಿ ಪೃಥಿವಿ. ‘ಪೃಥಿವಿ’ ಎಂದರೆ ಎಲ್ಲಾ ಗುಣಗಳ ನೆಲೆ ಎಂದರ್ಥ. ‘ಕಮಲಾಸನ ‘ಎಂದರೆ ಎಲ್ಲಾ ಗುಣಗಳ ಮೇಲೆ ಕುಳಿತವ ಎಂದರ್ಥ.  ಇದನ್ನು ಮಹಾಭಾರತದ ಮೋಕ್ಷಧರ್ಮಪರ್ವದ ವಿವರಣೆಯಿಂದ ನಾವು ತಿಳಿದುಕೊಳ್ಳಬಹುದು. “ಪ್ರಧಾನ ವಾಚಕಾಸ್ತ್ವೇಕಶ್ಚಾನನ್ಯಃ ಕೇವಲಃ ಸ್ವಯಮ್” ಇತಿ ಬ್ರಾಹ್ಮೇ ।  ‘ಸ್ವಯಮ್’ ಎಂದರೆ ಪ್ರಧಾನ ಎನ್ನುವ ಅರ್ಥವನ್ನು ಕೊಡುತ್ತದೆ ಎನ್ನುವುದನ್ನು ಬ್ರಹ್ಮಪುರಾಣ ಹೇಳುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇಲ್ಲಿ ಹೇಳಿರುವುದು ಜೀವೋತ್ತಮ, ಸೃಷ್ಟಿಯ ಹಿರಿಯ ಹಾಗೂ ಮೊದಲ ಜೀವ ಚತುರ್ಮುಖನನ್ನು ಎನ್ನುವುದು ತಿಳಿಯುತ್ತದೆ.


Monday, February 17, 2025

Shrimad BhAgavata in Kannada -Skandha-03-Ch-08_01

 ಅಷ್ಟಮೋSಧ್ಯಾಯಃ

ವಿದುರ-ಮೈತ್ರೇಯ ಸಂವಾದ: ವಿದುರನ ಪ್ರಶ್ನೆ


ಭಗವಂತ ಜ್ಞಾನಾನಂದಸ್ವರೂಪ ಅವನಿಗೆ ಆಕಾರವಾಗಲೀ, ವಿಕಾರವಾಗಲೀ ಇಲ್ಲ. ಹೀಗಿರುವಾಗ ಅವನು ಈ ಪ್ರಪಂಚದ ಸೃಷ್ಟಿಯನ್ನು ಹೇಗೆ  ಮತ್ತು ಏಕೆ ಮಾಡುತ್ತಾನೆ  ಎನ್ನುವ ವಿದುರನ ಪ್ರಶ್ನೆಯೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.


ಕ್ರೀಡಾಯಾ ಮುದ್ಯತೋSರ್ಹಸ್ಯ ಕಾಮಂ ಚಿಕ್ರೀಡಿಷಾSನ್ಯತಃ   । 

ಸ್ವತಸ್ತೃಪ್ತಸ್ಯ ತು ಕಥಂ ನಿರ್ವೃತಸ್ಯ ಸದಾSSತ್ಮನಃ ॥೩॥ 


ಕ್ರೀಡಾಯಾಃ  ಮುತ್ । ಅರ್ಹಸ್ಯ ಅಪೂರ್ಣಸುಖಸ್ಯ ।  ಅನ್ಯತಃ ಅರತಿತಃ    ॥*॥


ಭಗವಂತ ಜ್ಞಾನಾನಂದಸ್ವರೂಪ. ಅವನಿಗೆ ಆಕಾರವಾಗಲೀ ವಿಕಾರವಾಗಲೀ ಇಲ್ಲ. ಹೀಗಿರುವಾಗ ಭಗವಂತ ಅಜ್ಞಾನದಿಂದ ಕೂಡಿದ ಈ ಜಡಪ್ರಪಂಚವನ್ನು ಸೃಷ್ಟಿಮಾಡುವುದು ಹೇಗೆ ಸಾಧ್ಯ? ಎಲ್ಲವೂ ಭಗವಂತನ ಲೀಲೆ ಎಂದರೆ ನಿರ್ಗುಣ-ನಿರಾಕಾರನಾದ ಭಗವಂತ ತ್ರೈಗುಣ್ಯವರ್ಜಿತ. ಅವನಿಗೆ ಗುಣಗಳ ಸ್ಪರ್ಶವಿಲ್ಲ. ಹೀಗಿರುವಾಗ ಅವನು ತನ್ನನ್ನು ವಿಕಾರಗಳಿಗೆ ಒಡ್ಡಿಕೊಳ್ಳುವುದು ಹೇಗೆ?  ಎಲ್ಲವೂ ಭಗವಂತನ ಕ್ರೀಡೆ ಎಂದರೆ ಕ್ರೀಡೆಯ ಬಯಕೆ ಹುಟ್ಟುವುದು ಕೇವಲ ಅಲ್ಪ ಸುಖ ಉಳ್ಳವನಿಗೆ ಮಾತ್ರ.  ನಿತ್ಯತೃಪ್ತನಾದ ಭಗವಂತ ಸದಾ ಆನಂದಮಯ. ಹೀಗಾಗಿ ಅವನಿಗೆ ಸುಖ ಪ್ರಾಪ್ತಿಯಾಗಲೀ, ದುಃಖ ನಿವೃತ್ತಿಯಾಗಲೀ ಇಲ್ಲ. 


ದೇಶತಃ ಕಾಲತೋ ಯೋSಸಾವವಸ್ಥಾತಃ ಸ್ವತೋSನ್ಯತಃ ।

ಅವಿಲುಪ್ತಾವಬೋಧಾತ್ಮಾ ಸ ಯುಜ್ಯೇತಾಜಯಾ ಕಥಮ್  ॥೫॥


ಸ್ವತಃ ನಿರ್ಗುಣನಾದ ಭಗವಂತನ ಜೊತೆಗೆ ಪ್ರಕೃತಿ ಇದ್ದಾಳೆ. ಅವಳಿಗೆ ಸತ್ವ-ರಜಸ್ಸು-ತಮಸ್ಸಿನೊಂದಿಗೆ ಸಂಬಂಧವಿದೆ. [ಅಜಾಮೇಕಾಂ ಲೋಹಿತಶುಕ್ಲಕೃಷ್ಣಾಂ ......    (ಶ್ವೇತಾಶ್ವತರ ಉಪನಿಷತ್ತು  ೦೪.೦೫)] ಎಂದೂ ಹುಟ್ಟದ ಅವಳು ಅನಾದಿನಿತ್ಯಳಾಗಿ ಭಗವಂತನ ಜೊತೆಗೆ ನಿಂತಿದ್ದಾಳೆ. ಅವಳು ತ್ರಿಗುಣಮಾನಿನಿ]. ಹೀಗಾಗಿ ಭಗವಂತ ಪ್ರಕೃತಿಯ(ಪತ್ನಿಯ) ಮುಖೇನ ಸೃಷ್ಟಿ ಮಾಡಿದ ಎನ್ನಬಹುದೇ ಎಂದರೆ ಅದೂ ಕೂಡುವುದಿಲ್ಲ. ಏಕೆಂದರೆ ಅಲ್ಲಿ ಭಗವಂತನಿಗೆ ಪ್ರಕೃತಿಯ ಸಂಬಂಧ ಹೇಗಾಯಿತು ಎನ್ನುವ ಪ್ರಶ್ನೆ ಬರುತ್ತದೆ. ಭಗವಂತನಿಗೆ ದೇಶತಃ, ಕಾಲತಃ ಅಜ್ಞಾನವಿಲ್ಲ. ಯಾವ ಅವಸ್ಥೆಯಲ್ಲೂ ಅಜ್ಞಾನವಿಲ್ಲ. ಹೀಗೆ ಯಾವ ಕಾರಣಕ್ಕೂ ಅರಿವಿನ ಲೋಪವಿಲ್ಲದ ಭಗವಂತನಿಗೆ ಪ್ರಕೃತಿ ನಿಮಿತ್ತವಾದ ಅಜ್ಞಾನ ಹೇಗೆ ಸಾಧ್ಯ? 

ಮನುಷ್ಯನ ಬದುಕಿನ ಒಳಿತು ಕೆಡುಕಿಗೆ ಮೂಲಭೂತವಾದುದು ಅವಿದ್ಯೆ. ಅಜ್ಞಾನವೆನ್ನುವ ಆವರಣ ಮನುಷ್ಯನನ್ನು ಸದಾ ಕಾಡುತ್ತಿರುತ್ತದೆ. ಇದಕ್ಕೆ ಕಾರಣ, ಮನುಷ್ಯ ಪ್ರಕೃತಿನಿರ್ಮಿತ. ಪ್ರಕೃತಿಯಿಂದ ಅವಿದ್ಯೆ, ಕಾಮ, ಕರ್ಮ, ದುಃಖ, ಇತ್ಯಾದಿ ಎಲ್ಲವೂ ಬರಬಹುದು. ಹೀಗಾಗಿ ಇವುಗಳ ಸ್ಪರ್ಶವೇ ಇಲ್ಲದ ಭಗವಂತನಿಗೆ ಪ್ರಕೃತಿಯ ಮೂಲಕ ಸೃಷ್ಟಿ ಮಾಡುವುದು ಸಾಧ್ಯವಿಲ್ಲವಲ್ಲವೇ ಎನ್ನುವುದು ಪ್ರಶ್ನೆ.  


ಭಗವಾನೇಕ ಏವೈಷ ಸರ್ವಕ್ಷೇತ್ರೇಷ್ವವಸ್ಥಿತಃ । 

ಅಮುಷ್ಯ ದುರ್ಭಗತ್ವಂ ವಾ ಕ್ಲೇಶೋ ವಾ ಕರ್ಮಭಿಃ ಕುತಃ ॥೬॥


ದುರ್ಭಗಕ್ಲೇಶಿಶರೀರ  ಸ್ಥತ್ವಾತ್ ತಸ್ಯಾಪಿ ಭಾವ್ಯಮ್ । ನ ಚ ತದ್ ಯುಜ್ಯತೇ ।


ಈ ಸೃಷ್ಟಿಯಲ್ಲಿ ಎರಡು ಇಲ್ಲಾ, ಎಲ್ಲವೂ ಆ ಭಗವಂತ ಒಬ್ಬನೇ ಎಂದರೆ, ಅಲ್ಲಿ ಬರುವ ಪ್ರಶ್ನೆ- ಅಂತಹ ಭಗವಂತನಿಗೆ ಸಂಸಾರಕ್ಕೆ ಬಂದು ಒದ್ದಾಡುವ ದೌರ್ಭಾಗ್ಯ ಏಕೆ ಬಂತು  ಎನ್ನುವುದು. ಜ್ಞಾನಾನಂದ ಸ್ವರೂಪನಾದ ಭಗವಂತನಿಗೆ ದುಃಖ ಹೇಗೆ ಬಂತು? ಕರ್ಮದಿಂದ ದುಃಖ ಎಂದರೆ, ಭಗವಂತನೇ ಅಜ್ಞಾನದಿಂದ ಕರ್ಮ ಮಾಡುವುದಾದರೆ ಅವನು ಭಗವಂತ ಆಗುವುದು ಹೇಗೆ?   ಇನ್ನು ಭಗವಂತ ಜೀವಭಾವ ಹೊಂದಿದ ಎಂದರೆ, ಜ್ಞಾನಿಯಾದ ಭಗವಂತನಿಗೆ ಅಜ್ಞಾನಿಯಾದ ಜೀವಭಾವವನ್ನು ಹೊಂದುವ ದೌರ್ಭಾಗ್ಯ ಏಕೆ ಬಂತು?

ಭಗವಂತ ಜೀವರಿಂದ ಬೇರೆ ಎಂದರೂ ಕೂಡಾ ಅಲ್ಲಿಯೂ ನಮಗೆ ಪ್ರಶ್ನೆ ಬರುತ್ತದೆ. ಸರ್ವಾಂತರ್ಯಾಮಿಯಾದ ಅವನಿಗೆ ಜೀವಕ್ಕೆ ಆಗುವ ಪ್ರತಿಯೊಂದು ಅನುಭವ ಆಗಬೇಕಲ್ಲವೇ? ಭಗವಂತನೇ ಎಲ್ಲವನ್ನೂ ಮಾಡಿಸುವುದಾದರೆ ಕರ್ಮದ ಫಲ ಅವನೇ ಅನುಭವಿಸಬೇಕಲ್ಲವೇ?  ಕರ್ಮ ಮಾಡುವುದು ಭಗವಂತ ಆದರೆ ನರಕ ಜೀವನಿಗೆ? 

ಈರೀತಿಯಾಗಿ ಇಲ್ಲಿ  ನಮ್ಮ-ನಿಮ್ಮೆಲ್ಲರ ಪ್ರತಿನಿಧಿಯಾಗಿ ವಿದುರ ಮೈತ್ರೇಯರನ್ನು ಪ್ರಶ್ನೆ ಮಾಡಿದ್ದಾನೆ. 


ಸೇಯಂ ಭಗವತೋ ಮಾಯಾ ನ್ಯಾಯ್ಯಂ ಯೇನ ವಿರುದ್ಧ್ಯತೇ  ।

 ಈಶ್ವರಸ್ಯ ವಿಮುಕ್ತಸ್ಯ ಕಾರ್ಪಣ್ಯಮುತ ಬನ್ಧನಂ ॥೯॥


ಸೇಯಂ ಭಗವತೋ ಮಾಯಾ । ಅಯಂ ಹಿ ಭಗವನ್ಮಹಿಮಾ । ತಸ್ಯ ಕಾರ್ಪಣ್ಯಬನ್ಧನಾದಿ  ನ ಯುಜ್ಯತ ಇತಿ ಯದುಕ್ತಂ ತನ್ನ್ಯಾಯ್ಯಮೇವ  ದುರ್ಭಗಾದಿಶರೀರಸ್ಥಸ್ಯಾಪಿ ತದ್ದೋಷಾಸ್ಪರ್ಶ  ಏವ ತನ್ಮಹಿಮೇತ್ಯರ್ಥಃ ।


ಭಗವಂತನ ವಿಷಯದಲ್ಲಿ ಕಾರ್ಪಣ್ಯ, ದಯನೀಯಸ್ಥಿತಿ, ದುಃಖ,  ಬಂಧನ, ಇವುಗಳ್ಯಾವುದೂ ಕೂಡುವುದಿಲ್ಲ.  ಯಾವುದು ತರ್ಕಕ್ಕೆ ವಿರುದ್ಧವೋ ಅದನ್ನು ಒಪ್ಪಲಾಗದು. ಹಾಗಿದ್ದರೆ ನ್ಯಾಯ ಯಾವುದು?  ಯಾರು ಸರ್ವಸಮರ್ಥನೋ  ಅವನೆಂದೂ   ದೈನ್ಯನಲ್ಲ. ಯಾರು ನಿತ್ಯಮುಕ್ತನೋ ಅವನಿಗೆಲ್ಲಿಯ ಬಂಧನ? ಯಾರು ಈಶ್ವರನೋ  ಅವನಿಗೆಲ್ಲಿಯ ದುಃಖ? ಹೀಗಾಗಿ ಭಗವಂತನ ಮಹಿಮೆ ನಮ್ಮ ತರ್ಕಕ್ಕೆ ಮೀರಿದ ವಿಷಯ.

ಕರ್ಮಮಾಡಿದವನಿಗೆ ಫಲವಲ್ಲ, ಯಾರಿಗೋಸ್ಕರ ಕರ್ಮ ನಡೆಯಿತೋ ಅವನಿಗೆ ಫಲ. ಉದಾಹರಣೆಗೆ ಪುರೋಹಿತರು ಮಾಡಿಸುವ ಪೂಜೆಯ ಫಲ ಅವರು ಯಾರಿಗೋಸ್ಕರ ಆ ಪೂಜೆಯನ್ನು ಮಾಡಿದರೋ ಅವರಿಗೆ. ಭಗವಂತ ಮಾಡುವುದು ನಮಗೋಸ್ಕರ. ಸರ್ವಸಮರ್ಥನಾದ ಭಗವಂತ ‘ಜೀವನ’ ಜೊತೆಗಿದ್ದಾನೆ ನಿಜ, ಆದರೆ ಅವನು ನಮ್ಮಂತೆ ಅಸ್ವತಂತ್ರನಲ್ಲ. 

ಭಗವಂತ ಜೀವನ ಜೊತೆಗಿದ್ದಾನೆ ಆದರೆ ಅಲ್ಲಿ ಯಾವ ಲೇಪವೂ ಅವನಿಗಿಲ್ಲ. ಅವನು ಎಲ್ಲವನ್ನೂ ಮಾಡುತ್ತಾನೆ, ಆದರೆ ಏನನ್ನೂ ಮಾಡುವುದಿಲ್ಲ! (ಈ ರೀತಿಯ ವಿರೋಧಾಭಾಸ  ಕೇವಲ ಭಗವಂತನಲ್ಲಿ ಮಾತ್ರ ಕೂಡುತ್ತದೆ).   ನಾವಿಲ್ಲಿ ತಿಲಿಯಬೇಕಾಗಿರುವುದು ಏನೆಂದರೆ ಅಂಟಿಕೊಂಡು ಮಾಡುವ ಕರ್ಮ ನಮಗೆ ಫಲ ಕೊಡುತ್ತದೆ. ಭಗವಂತನಿಗೆ ಯಾವ ಕರ್ಮದ ಅಂಟೂ ಇಲ್ಲ. ಹೀಗಾಗಿ ಅವನಿಗೆ ಕರ್ಮಫಲದ ಲೇಪವಿಲ್ಲ.  ಭಗವಂತನಿಗೆ ‘ನಾನು ಮಾಡಿದೆ, ನನ್ನಿನ್ದಾಯಿತು’ ಎನ್ನುವ ಅಭಿಮಾನ (ego/attachment) ಇಲ್ಲವೇ ಇಲ್ಲ. ದೇವತೆಗಳಿಗಾದರೂ ಅಭಿಮಾನವಿದೆ ಆದರೆ ಭಗವಂತನಲ್ಲಿಲ್ಲ. 

ನಾವು ನೋಡಿದ ಯಾವ  ವಸ್ತುವೂ ಅವನಲ್ಲ. ಏಕೆಂದರೆ ನಮಗೆ ತಿಳಿದಿರುವ ಎಲ್ಲಾ ವಸ್ತುಗಳೂ ಕೂಡಾ ತ್ರಿಗುಣದ ಸಂಪರ್ಕ ಇರುವಂತಹದ್ದೇ.  ಆದರೆ ಭಗವಂತ ತ್ರಿಗುಣಾತೀತನಾಗಿ ಪ್ರಕೃತಿಯಿಂದ ಸೃಷ್ಟಿಯನ್ನು ಮಾಡುತ್ತಾನೆ. ತ್ರಿಗುಣಗಳಿಂದ ಪ್ರಭಾವಿತವಾಗುವುದು  ಪ್ರಪಂಚವೇ ಹೊರತು  ಭಗವಂತನಲ್ಲ. ಗುಣಗಳ ಪ್ರಭಾವ ಇದ್ದಾಗ ಅಲ್ಲಿ ಗುಣಬಂಧನ. ಯಾವುದರಿಂದಲೂ ಪ್ರಭಾವಿತನಾಗದ ಭಗವಂತ  ನಮ್ಮ ಮನಸ್ಸಿನ ಮೇಲೆ ಪ್ರಭಾವ ಮಾಡಿ  ‘ಅಭಿಮಾನ ‘ ಕೊಟ್ಟರೆ ಅದರ ಪರಿಣಾಮ  ನಮ್ಮ ಮೇಲಾಗುತ್ತದೆ.  ಇದೆಲ್ಲವೂ ಭಗವಂತನ ಮಹಿಮೆ.  ಅವನು ಸರ್ವಕರ್ತ,  ಸರ್ವಸಮರ್ಥ, ಸರ್ವಜ್ಞ . (ಇಲ್ಲಿ ಸರ್ವ ಎನ್ನುವ ಪದ  ಸಮಸ್ತ ಜೀವರನ್ನು ಹೇಳುವ ಪದ.     ಜೀವರೇ ಇಲ್ಲದಿದ್ದರೆ   ಸರ್ವ ಪದ ಭಗವಂತನಲ್ಲಿ ಕೂಡುವುದಿಲ್ಲ). ಹೀಗಾಗಿ ಸದಾ ಜೀವನೊಂದಿಗೆ ಭಗವಂತ ಇದ್ದರೂ ಕೂಡಾ ಅದರ ಪರಿಣಾಮ ಅವನ ಮೇಲಾಗುವುದಿಲ್ಲ.   

ತನಗೆ ಏನೂ ಉಪಯೋಗವಿಲ್ಲದಿದ್ದರೂ ಕೂಡಾ ಭಗವಂತ ಎಲ್ಲವನ್ನೂ ಏಕಾಗಿ ನಿಷ್ಫಲವಾದುದ್ದನ್ನು ಮಾಡುತ್ತಾನೆ ಎನ್ನುವುದು ತಿಳಿಯಬೇಕಾದರೆ ನಾವು ಫಲದ ಎರಡು ವಿಧವನ್ನು ತಿಳಿಯಬೇಕಾಗುತ್ತದೆ. ೧. ಸ್ವಪ್ರಯೋಜಕ  ೨. ಪರಪ್ರಯೋಜಕ. ಸ್ವಪ್ರಯೋಜಕ ಅಥವಾ ಸ್ವಾರ್ಥಕ್ಕಾಗಿ ಮಾಡುವುದನ್ನು ಯಾರೂ ಗೌರವಿಸುವುದಿಲ್ಲ. ಆದರೆ ಭಗವಂತ ಮಾಡುವುದು ತನಗೊಸ್ಕರವಲ್ಲ ಆದರೆ ನಮಗೋಸ್ಕರ. ಇನ್ನು ಸಂಸಾರವನ್ನು ಬೇಡದೇ ಇರುವ  ನಮಗೆ ಭಗವಂತ ಸಂಸಾರವನ್ನು ಏಕೆ ಕೊಟ್ಟ ಎನ್ನುವ ಪ್ರಶ್ನೆ. ಹೌದು, ಯಾವುದೇ ಎಚ್ಚರವಿಲ್ಲದೇ  ನಿದ್ರೆಯಲ್ಲಿದ್ದ ನಮಗೆ ಎಚ್ಚರ ಕೊಟ್ಟು, ಅರಿವನ್ನು ಕೊಟ್ಟು,  ಬೆಳೆಯಲು ಅವಕಾಶ ಮಾಡಿ ಕೊಟ್ಟವ ಆ ಭಗವಂತ. ನಮಗಾಗಿ, ನಮ್ಮ ಬೆಳವಣಿಗೆಗಾಗಿ ಕಾರುಣ್ಯದಿಂದ ಇದೆಲ್ಲವನ್ನೂ ಅವನು ಮಾಡುತ್ತಾನೆ. ಇದೇ ಅವನ ಮಹಿಮೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ಅನೇಕ ಯುಕ್ತಿಗಳು(logics) ಬಾಲಿಶ ಎನ್ನುವುದು ನಮಗೆ ತಿಳಿಯುತ್ತದೆ. ನಾವು ಎತ್ತರಕ್ಕೆರಿದಂತೆ ನಮ್ಮ ಯುಕ್ತಿ ಬದಲಾಗುತ್ತದೆ. ನಮ್ಮ ಅನುಭವ ಬೆಳೆದಂತೆ ನಮ್ಮ ಯುಕ್ತಿ ಬೆಳೆಯುತ್ತದೆ ಮತ್ತು ಹಿಂದಿನ ಬಾಲಿಷ ಯುಕ್ತಿ ಬಿದ್ದುಹೋಗುತ್ತದೆ.

ಈ ಅಧ್ಯಾಯದಲ್ಲಿ ಹೇಳಿದ ಮಾತುಗಳಿಗೆ ಆಚಾರ್ಯರು ಭಾಲ್ಲವೇಯಶ್ರುತಿ ಮತ್ತು ಬ್ರಹ್ಮಾಂಡಪುರಾಣದ ವಚನದ ಪ್ರಮಾಣ ನೀಡಿ ವಿವರಿಸಿರುವುದನ್ನು ನಾವಿಲ್ಲಿ ಕಾಣಬಹುದು. 

“ಕಥಂ ದೇಹೇ ಪರೋ  ದೇವೋ ನ ಲಿಪ್ಯೇತೇಹ  ಬಂಧನೈಃ ।  ಕಥಂ ನ ದುಃಖೀ ಸ ಭವೇದ್ ದುಃಖೀ ಚೇದೀಶ್ವರಃ ಕುತ ।  ಮಹಿಮಾ ಪರಮಸ್ಯೆಷ ಯದ್ ದೇಹಸ್ಥೋ ನ ಬದ್ಧ್ಯತೇ  । ಯದದುಃಖೀ ಸ ಈಶಾನೋ ಮಾಯೇತಿ ಮಹಿಮೋಚ್ಯತೇ ।  ಪ್ರಧಾನಂ ಮಯ  ಇತ್ಯಾಹುಃ ಪ್ರಾಧಾನ್ಯಾನ್ಮಾಯತಾ  ಭವೇತ್ । ಅತೋ ಮಾಯಾಮಯಂ ಪ್ರಾಹುರ್ಮಹಾಮಾಯಮನಾಮಯಮ್” ಇತಿ ಭಾಲ್ಲವೇಯಶ್ರುತಿಃ ॥* ॥

 ಅಲುಪ್ತಬೋಧರೂಪತ್ವಾನ್ನಾಸೌ ಪ್ರಾಕೃತದೇಹವಾನ್  । ನ ಚ ಸೃಷ್ಟಾದಿಕಂ ಭ್ರಾನ್ತಿರ್ಬ್ರಾನ್ತಿವಾದಾ ಹಿ ದಾನವಾಃ । 

ಅತೋ ಭ್ರಾನ್ತ್ಯಾ ಹಿ ಸಮ್ಬನ್ಧೋ  ನಾಸ್ಯ ಕ್ವಚನ ಯುಜ್ಯತೇ । ಭ್ರಾನ್ತ್ಯಾ ಜೀವಸ್ಯ ಸಂಸಾರ ಈಶಜ್ಞಾನಾದ್ ವಿಲೀಯತೇ । ಭ್ರಾನ್ತಿರ್ಹಿ ದೇಹಾಭಿಮತಿರತೋ ಜ್ಞಾನಾದ್  ವಿನಶ್ಯತಿ ॥ ಇತಿ ಬ್ರಹ್ಮಾಂಡೇ ॥



ಯದೇನ್ದ್ರಿಯೋಪರಾಮೋSರ್ಥಾ ದೃಷ್ಟಾತ್ಮನಿ  ಪರೇ ಹರೌ ।

ವಿಲೀಯನ್ತೇ ತದಾ ಕ್ಲೇಶಾಃ ಸಂಸುಪ್ತಸ್ಯೇವ ಕೃತ್ಸ್ನಶಃ ॥೧೩॥


ಇಂದ್ರಿಯೋಪರಾಮಾಖ್ಯಃ ಪುರುಷಾರ್ಥೋ ಮುಕ್ತಿಃ  ॥*॥


ನಾವು ದುಃಖದಿಂದ ಪಾರಾಗುವ ಏಕಮಾತ್ರ ಮಾರ್ಗವೆಂದರೆ-ನಮ್ಮ ಇಂದ್ರಿಯಗಳನ್ನು ಭಗವಂತನಲ್ಲಿ ನೆಲೆಸಿಬಿಡುವುದು. ಎಲ್ಲವೂ ಭಗವಂತನ ಸೃಷ್ಟಿ, ಎಲ್ಲವೂ ಭಗವಂತನ ಪ್ರತಿಬಿಂಬ, ಎಲ್ಲರೂ ಭಗವಂತನ ಪ್ರತಿಮೆಗಳು, ಅವರೊಳಗೆ ಭಗವಂತನಿದ್ದಾನೆ, ಹೀಗೆ ಯೋಚಿಸಿದಾಗ ಅಲ್ಲಿ ‘ನನ್ನ’ ಎನ್ನುವ ಅಭಿಮಾನ ಹೊರಟುಹೋಗಿ ಮನಸ್ಸು ಭಗವಂತನಲ್ಲೇ ನೆಲೆ ನಿಲ್ಲುತ್ತದೆ. ಇಂದ್ರಿಯಗಳನ್ನು ಮೇಲ್ಮುಖಮಾಡಿ, ಎತ್ತರದ ಸತ್ಯವನ್ನು ಕಾಣುವುದೇ ಪುರುಷಾರ್ಥ, ಅದೇ ಮೋಕ್ಷ. ಸರ್ವೋತ್ತಮನಾದ ಭಗವಂತನ ಸ್ವರೂಪ ನಮ್ಮ ಅನುಭವಕ್ಕೆ ಬಂದಾಗ ದುಃಖ ನಾಶವಾಗುತ್ತದೆ. ಇದು ಹೇಗೆ ಎನ್ನುವುದಕ್ಕೆ ಒಂದು ದೃಷ್ಟಾಂತ ಗಾಢನಿದ್ದೆ. ಅಲ್ಲಿ ಜೀವ ದುಃಖದ ಲವಲೇಶವೂ ಇಲ್ಲದೇ ಭಗವಂತನ ಜೊತೆಗಿರುತ್ತದೆ. ಇದೇ ಸ್ಥಿತಿಯನ್ನು ಎಚ್ಚರದಲ್ಲಿ ಸ್ಥಾಪಿಸುವುದೇ ಅಧ್ಯಾತ್ಮ. 


ಸಞ್ಛಿನ್ನಃ ಸಂಶಯೋ ಮಹ್ಯಂ ತವ ಸೂಕ್ತಾಸಿನಾ ವಿಭೋ ।

 ಉಭಯತ್ರಾಪಿ ಭಗವನ್ ಮನೋ ಮೇ ಸಮ್ಪ್ರಧಾವತಿ ॥೧೫॥


  ಸಾಧು ತದ್ ವ್ಯಾಹೃತಂ ವಿದ್ವನ್ನಾತ್ಮಮಾಯಾಯನಂ ಹರೇಃ ।

 ಆಭಾತ್ಯಪಾರ್ಥಂ ನಿರ್ಮೂಲಂ ವಿಶ್ವಮೂಲಂ ನ ಯದ್ ಬಹಿಃ ॥೧೬॥


ಸ್ವರೂಪಸಾಮರ್ಥ್ಯಾಶ್ರಯಂ ಯದ್ ವ್ಯಾಹೃತಮ್  । ಅಪಾರ್ಥಂ ನಿರ್ಮೂಲಂ ಚ ದೇಹಸಮ್ಬನ್ಧಿತ್ವಾದ್ಯಾಭಾತಿ ।  ವಿಶ್ವಮೂಲಂ ಬ್ರಹ್ಮ ಚ ಯನ್ಮಮ ಜ್ಞಾನಾದ್ ಬಹಿರ್ನ ಭವತಿ । ತಸ್ಮಾದುಭಯತ್ರ ಧಾವತಿ ॥*॥



“ನನಗೋಸ್ಕರ  ಸಂಶಯ ಪರಿಹರಿಸಿದಿರಿ”  ಎನ್ನುತ್ತಾನೆ ವಿದುರ.  ಇಲ್ಲಿ  “ ಮಹ್ಯಂ” ಎನ್ನುವುದು ವಿಶೇಷ ಪ್ರಯೋಗ.  ವಿದುರ ತನಗಾಗಿ ಪ್ರಶ್ನೆ ಮಾಡಿರುವುದಲ್ಲ. ಮುಂದಿನ ಜನಾಂಗಕ್ಕೆ ಜ್ಞಾನವನ್ನು ತಲುಪಿಸುವ ಸಲುವಾಗಿ ಈ ಪ್ರಶ್ನೆ ಮಾಡಿರುವುದು. ಈ ಹಿಂದೆ ವಿಶ್ಲೇಷಿಸಿದಂತೆ ವಿದುರ ಮೂಲರೂಪದಲ್ಲಿ ಭಗವಂತನ ಕುರಿತು ನಚಿಕೇತನಿಗೆ  ಉಪದೇಶ ಮಾಡಿರುವ ಅಪರೋಕ್ಷ ಜ್ಞಾನಿಯಾದ ಯಮಧರ್ಮ. ಇಲ್ಲಿ ವಿದುರನಾಗಿ ಅವತರಿಸಿರುವುದು ವೇದವ್ಯಾಸರ ಮಗನಾಗಿ. ವೇದವ್ಯಾಸರಿಂದ ಅಧ್ಯಯನವನ್ನೂ ಮಾಡಿರುವ ಅವನಿಗೆ ಈ ಎಲ್ಲಾ ಜ್ಞಾನ ಇದ್ದೇ ಇದೆ. ಆದರೂ ಕೂಡಾ ನಮಗಾಗಿ, ಮುಂದಿನ ಜನಾಂಗಕ್ಕಾಗಿ  ಆತ ಇಲ್ಲಿ ಪ್ರಶ್ನೆ ಮಾಡಿದ್ದಾನೆ. “ಇಡೀ ಮನುಕುಲಕ್ಕೆ ಬರಬಹುದಾದ ಸಂಶಯವನ್ನು ನೀವು ನಿಮ್ಮ ಅನುಭವ ಮತ್ತು ತರ್ಕದಿಂದ ಕೂಡಿರುವ ಮಾತು ಎನ್ನುವ ಖಡ್ಗದಿಂದ ಕತ್ತರಿಸಿದಿರಿ” ಎಂದಿದ್ದಾನೆ ವಿದುರ. 

ಯಾವುದೇ ಸಂಗತಿ ಶಾಸ್ತ್ರೀಯವಾಗಿದ್ದರೂ ಕೂಡಾ, ಅದರ ಅನುಭವ ಇಲ್ಲದೇ ಹೇಳಿದರೆ ಅದು ಕೇಳುಗನ ಮೇಲೆ ಪರಿಣಾಮ ಬೀರುವುದಿಲ್ಲ. ಅನುಭವದಿಂದ ಸತ್ಯವನ್ನು ಕಂಡು ಹೇಳಿದಾಗ ಅದು ಜ್ಞಾನವನ್ನು ನೀಡುತ್ತದೆ.  ಅನುಭವಸಿದ್ಧವಾದ , ಶ್ರುತಿ ಸಿದ್ಧವಾದ ಮಾತು ತರ್ಕಬದ್ದವಾಗಿ ಇದ್ದೇ ಇರುತ್ತದೆ.     ಹೀಗೆ  “ಸಮಸ್ತವಿಷಯವನ್ನು ಗ್ರಹಿಸುವ ಬುದ್ಧಿಯುಳ್ಳ , ಸಾಧನೆಯಿಂದ ಸತ್ಯವನ್ನು ಅನುಭವಿಸಿರುವ ನಿಮ್ಮ ಮಾತು ಸತ್ಯ “ ಎನ್ನುತ್ತಾನೆ ವಿದುರ.


ಮುಂದುವರಿದು ವಿದುರ ಮನುಕುಲದ ಸರ್ವೇಸಾಮಾನ್ಯವಾದ ಗೊಂದಲದ ಕುರಿತು ಮಾತನಾಡುತ್ತಾ ಹೇಳುತ್ತಾನೆ: “ನೀವು ಹೇಳಿದ ವಿಷಯ ಸಂಪೂರ್ಣ ಮನವರಿಕೆಯಾಯಿತು. ಸರ್ವೋತ್ಕೃಷ್ಟನಾದ ಭಗವಂತ  ನಮ್ಮನ್ನು ಎಂದೂ ಬಿಟ್ಟುಹಾಕುವುದಿಲ್ಲ, ರಕ್ಷಿಸಿಯೇ ರಕ್ಷಿಸುತ್ತಾನೆ.  ಆದರೆ ಈ  ವಿಷಯದ ಜ್ಞಾನವಿದ್ದೂ ಕೂಡಾ, ತಕ್ಷಣ    ಮನಸ್ಸು ಪ್ರಾಪಂಚಿಕ ವಿಷಯದತ್ತ ಹರಿದುಬಿಡುತ್ತದೆ.  ಈ ದ್ವಂದ್ವದಿಂದ ಈಚೆ  ಬರಲಾಗುತ್ತಿಲ್ಲ.” ಎಂದು.

ಇನ್ನೊಂದು ರೀತಿಯಲ್ಲಿ ವಿದುರ ಹೇಳುತ್ತಾನೆ: “ನೀವು ಎಲ್ಲವನ್ನೂ ಸಮರ್ಪಕವಾಗಿ ವಿವರಿಸಿದಿರಿ.ಎಲ್ಲವೂ ಭಗವಂತನ ಸ್ವರೂಪಭೂತ ಮಹಿಮೆ. ಅದು ತಾರ್ಕಿಕ ಪರಿಕಲ್ಪನೆಗೆ ಮೀರಿರುವ ವಿಷಯ.  ಇಲ್ಲಿ ‘ನಾನು, ನನ್ನದು’, ಇತ್ಯಾದಿ  ಕೇವಲ ಅಪಾರ್ಥ ಎನ್ನುವುದೂ ನನಗೆ ತಿಳಿದಿದೆ. ಆದರೂ ಕೂಡಾ ಇದನ್ನು ವಿಶ್ವಕ್ಕ ಕಾರಣನಾಗಿರುವ ಭಗವಂತನ ಅನುಸಂಧಾನದ ಒಳಗೇ ಇದ್ದು ನಾವು  ವ್ಯವಹಾರದಲ್ಲಿ  ಮತ್ತೆ ‘ನಾನು-ನನ್ನದು-ನನ್ನಿಂದ’, ಇತ್ಯಾದಿಯನ್ನು   ಬಳಸುತ್ತೇವೆ. ಈ ದ್ವಂದ್ವ ಬದುಕಿನುದ್ದಕ್ಕೂ ಇದ್ದು ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ”. 

[ವಿದುರ ಹೇಳುತ್ತಿರುವ ದ್ವಂದ್ವ ಅಪರೋಕ್ಷಜ್ಞಾನಿಗಳನ್ನೂ ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಗರ್ಗಾಚಾರ್ಯರು. ಶ್ರೀಕೃಷ್ಣನಿಗೆ ನಾಮಕರಣ ಮಾಡಿ ಭಗವಂತನ ಮಹಿಮೆಯನ್ನು ಇತರರಿಗೆ ವಿವರಿಸಿದ ಅವರು ಮುಂದೆ ಯಾವುದೋ ಒಂದು ಅವಮಾನ ನಿಮಿತ್ತ ಶ್ರೀಕೃಷ್ಣನನ್ನು ಕೊಲ್ಲುವ ಮಗ ಹುಟ್ಟಬೇಕು ಎಂದು ತಪಸ್ಸು ಮಾಡುತ್ತಾರೆ.  ಅದೇ ರೀತಿ ಇಂದ್ರ. ಭಗವಂತ ಭೂಮಿಯಲ್ಲಿ ಅವತರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದ ಇಂದ್ರ, ಗೋವರ್ಧನಗಿರಿ ಪ್ರಕರಣದಲ್ಲಿ ಮಳೆ ಸುರಿಸಿ ಕೃಷ್ಣನ ವಿರುದ್ಧ ನಿಲ್ಲುತ್ತಾನೆ].  


ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ ।

ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯನ್ತರಿತೋ ಜನಃ ॥೧೭॥


“ಏನೂ ಗೊತ್ತಿಲ್ಲದವನೂ  ಆನಂದವಾಗಿರುತ್ತಾನೆ,  ಅರಿವಿನ ತುತ್ತತುದಿಯಲ್ಲಿರುವವನೂ ತನ್ನ ಸಮಸ್ಯೆಗಳಿಗೆ ತಾನೇ ಉತ್ತರ ಕಂಡುಕೊಂಡು ಅದರಿಂದ ಆನಂದವಾಗಿರುತ್ತಾನೆ.  ಇವರಿಬ್ಬರ ಮಧ್ಯದಲ್ಲಿರುವ ನಮಗೇ ಗೊಂದಲ. ಇದು ನಮ್ಮ ಪಾಡು” ಎನ್ನುತ್ತಾನೆ ವಿದುರ.  (ಭರ್ತೃಹರಿ ಇದೇ ಮಾತನ್ನು ಹೀಗೆ ಹೇಳಿದ್ದಾನೆ-   ‘ಅಜ್ಞಃ ಸುಖಮಾರಾಧ್ಯಃ ಸುಖತರಮಾರಧ್ಯತೇ ವಿಶೇಷಜ್ಞಃ । ಜ್ಞಾನಲವದುರ್ವಿದಗ್ಧಂ ಬ್ರಹ್ಮಾSಪಿ ನರಂ ನ ರಂಜಯತಿ’).


ಅರ್ಥಾಭಾವಂ ವಿನಿಶ್ಚಿತ್ಯ ಪ್ರತೀತಸ್ಯಾಪ್ಯನಾತ್ಮನಃ  ।

ತಾಂ ಚಾಪಿ ಯುಷ್ಮಚ್ಚರಣಸೇವಯಾSಹಂ ಪರಾಣುದೇ ॥೧೮॥


ತಸ್ಮಾದನ್ತರಿತೋSಸ್ಮಿ | ತಥಾSಪಿ ತಾಂ ಪ್ರತೀತಿಂ ಪರಾಣುದೇ |

ದುರಾಪಾ ಹ್ಯಲ್ಪತಪಸಾಂ ಸೇವಾ ವೈಕುಣ್ಠವರ್ತ್ಮಸು ।

ಯತ್ರೋಪಗೀಯತೇ ನಿತ್ಯಂ ದೇವದೇವೋ ಜನಾರ್ದನಃ ॥೨೦ ॥


ನಮ್ಮ ಬುದ್ಧಿ  ಒಂದು ತರ ಕೆಲಸ ಮಾಡಿದರೆ ನಮ್ಮ ಪ್ರವೃತ್ತಿ ಇನ್ನೊಂದು ತೆರನಾಗಿರುತ್ತದೆ. ಅನಾತ್ಮ ಎಂದು ತಿಳಿದಿದ್ದರೂ ಕೂಡಾ ಅದನ್ನೇ ಆತ್ಮ ಎಂದು ನಾವು ಭ್ರಮಿಸುತ್ತೇವೆ. ಅರ್ಥಶೂನ್ಯ ಎಂದು ತಿಳಿದಿದ್ದರೂ ಕೂಡಾ ‘ನಾನು-ನನ್ನದು-ನನ್ನಿಂದ’ ಇತ್ಯಾದಿ ‘ಪ್ರತೀತಿ’ ಸದಾ ನಡೆಯುತ್ತಿರುತ್ತದೆ.  ಈ ಅನಾತ್ಮದ ಪ್ರತೀತಿಯಿಂದ ಹೊರಬರಲು ಇರುವ ಮಾರ್ಗ ಜ್ಞಾನಿಗಳ ಪಾದಸೇವೆ. ನಿಮ್ಮ ಅನುಗ್ರಹದಿಂದ ನನ್ನ ಸಂಶಯ ಪರಿಹಾರವಾಗುತ್ತದೆ ಎನ್ನುವ ಧೈರ್ಯ ನನಗಿದೆ.  ಸದಾ ದೇವದೇವನಾದ ಭಗವಂತನ ಗುಣಗಾನ ಮಾಡುವ, ಪರಮಾತ್ಮನನ್ನು ಸೇರುವ ದಾರಿಯನ್ನು ತೋರುವ ನಿಮ್ಮ ಸೇವೆ ಅಲ್ಪಪುಣ್ಯವಂತರಿಗೆ ದುರ್ಲಭ. 


“ಆತ್ಮನಸ್ತು ಗುಣಾಭಾವಂ ವದತೋ ನ ತ್ವಸತ್ಯತಾ । ಅಪೃಷ್ಟಸ್ಯ ದಮಾರ್ಥ ಚ ಗುಣಾಯೈವ ಭವಿಷ್ಯತಿ” ಇತಿ ವ್ಯಾಸಸ್ಮೃತೇರ್ವಿದ್ಯಮಾನಮಪ್ಯನುಭವಮನ್ಯಥಾ ವದತಿ ವಿದುರಃ । “ದ್ರೋಣದೌಣಿಕೃಪಾಃ ಪಾರ್ಥಾ ಭೀಷ್ಮೋ ವಿದುರಸಞ್ಜಯೌ ।  ಯೇ ಚಾನ್ಯೇ  ತತ್ರ ದೇವಾಂಶಾಃ ಸಮ್ಯಕ್ ತತ್ವಾಪರೋಕ್ಷಿಣಃ”  ಇತಿ ಸ್ಕಾಂದೇ  ॥*॥


ಈ ಹಿಂದೆ ವಿವರಿಸಿದಂತೆ  ವಿದುರ ಮೂಲರೂಪದಲ್ಲಿ ಅಪರೋಕ್ಷ ಜ್ನಾನಿಯಾಗಿರುವ ಯಮಧರ್ಮ. ಹಾಗಾಗಿ  ತಾರತಮ್ಯದಲ್ಲಿ ಮೈತ್ರೇಯರಿಗಿಂತ  ಬಹಳ ಮೇಲಿರುವವನು. ಇಂತಹ ವಿದುರ ತನ್ನಲ್ಲಿ ಜ್ಞಾನಾದಿ ಗುಣಗಳಿಲ್ಲ ಎಂದು ಹೇಳಿದಾಗ ಅದು ದೋಷವಾಗುವುದಿಲ್ಲವೇ  ಎನ್ನುವ ಪ್ರಶ್ನೆಗೆ ಆಚಾರ್ಯರು ಸ್ಕಂಧಪುರಾಣದ ಪ್ರಮಾಣದೊಂದಿಗೆ ಉತ್ತರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ.  ಜಿಜ್ಞಾಸೆಯಿಂದ ಕೇಳುವವರಿಗೆ ತತ್ತ್ವೋಪದೇಶ  ಮಾಡಬೇಕು ಎನ್ನುವುದು ವಿಧಿ. ವಿದುರ ಇಲ್ಲಿ ಪ್ರಶ್ನೆ ಕೇಳುತ್ತಿರುವುದು ಲೋಕಕ್ಕೆ ಉಪಕಾರವಾಗಲೀ ಎಂದೇ ಹೊರತು  ಅಜ್ಞಾನದಿಂದಲ್ಲ.  ಹೀಗಾಗಿ ಅವನಿಗೆ ಯಾವ ದೋಷವೂ ಇಲ್ಲ. ದ್ರೋಣ, ಅಶ್ವತ್ಥಾಮ, ಕೃಪ, ಪಾಂಡವರು, ಭೀಷ್ಮ, ವಿದುರ, ಸಂಜಯ, ಇವರೆಲ್ಲರೂ ಕೂಡಾ ಪರಮಾತ್ಮನನ್ನು ಅಪರೋಕ್ಷದಲ್ಲಿ ಕಂಡ ದೇವಾಂಶಸಂಭೂತರೇ ಆಗಿದ್ದಾರೆ.


 ಸೃಷ್ಟ್ವಾSಗ್ರೇ ಮಹದಾದೀನಿ ಸವಿಕಾರಾಣ್ಯನುಕ್ರಮಾತ್ ।

 ತೇಭ್ಯೋ ವಿರಾಜಮುದ್ಧೃತ್ಯ ತಮನು ಪ್ರಾವಿಶದ್ ವಿಭುಃ ॥೨೧॥


ಯಮಾಹುರಾದ್ಯಂ ಪುರುಷಂ ಸಹಸ್ರಾಙ್ಘ್ರ್ಯೂರುಬಾಹುಕಮ್  ।

ಯತ್ರ ವಿಶ್ವ ಇಮೇ ಲೋಕಾಃ ಸವಿಕಾಸಂ ಸಮಾಸತೇ ।

ಯಸ್ಮಿನ್ ದಶವಿಧಃ ಪ್ರಾಣಃ ಸೇಂದ್ರಿಯಾರ್ಥೇನ್ದ್ರಿಯಸ್ತ್ರಿವೃತ್  ॥ ೨೨ ॥


ಇಲ್ಲಿ ವಿದುರ ಸೃಷ್ಟಿಯ ಕುರಿತು ಮೈತ್ರೇಯರು ಈ ಹಿಂದೆ ಹೇಳಿದ ವಿವರಣೆಯ ಸಾರಾಂಶವನ್ನು ಹೇಳುತ್ತಿರುವುದನ್ನು ಕಾಣುತ್ತೇವೆ.  ಮೊತ್ತ ಮೊದಲು ಬ್ರಹ್ಮಾಂಡದಲ್ಲಿ ಮಹತತ್ತ್ವದ(ಪಿಂಡಾಂಡದಲ್ಲಿ ಚಿತ್ತದ) ಸೃಷ್ಟಿಯಾಯಿತು. ಇದರಿಂದ ಮಹಾಪ್ರಳಯದಲ್ಲಿ ಎಚ್ಚರತಪ್ಪಿ ಮಲಗಿದ್ದ ಜೀವಕ್ಕೆ ಎಚ್ಚರವಾಯಿತು. ನಂತರ ಅಹಂಕಾರತತ್ತ್ವದ ಸೃಷ್ಟಿಯಾಯಿತು. ನಂತರ ಪಂಚಭೂತಗಳು, ಪಂಚೇಂದ್ರಿಯಗಳು,  ಇಂದ್ರಿಯಾಭಿಮಾನಿ ದೇವತೆಗಳು, ಹೀಗೆ ಒಂದರ ನಂತರ ಒಂದು ಕ್ರಮಬದ್ಧವಾಗಿ ಸೃಷ್ಟಿಯಾಯಿತು. ನಂತರ ಭಗವಂತ  ಬಿಡಿಬಿಡಿಯಾಗಿದ್ದ ಈ ಎಲ್ಲವನ್ನೂ  ಒಟ್ಟುಗೂಡಿಸಿ ಪಂಚಭೂತಗಳ ಸಮಷ್ಟಿಯಿಂದ ಇಡೀ ಬ್ರಹ್ಮಾಂಡದ  ಸೃಷ್ಟಿ ಮಾಡಿ, ‘ಪುರುಷ’ ರೂಪದಲ್ಲಿ ಬ್ರಹ್ಮಾಂಡವನ್ನು ಪ್ರವೇಶಿಸಿದ. ಬ್ರಹ್ಮಾಂಡದ ಸೃಷ್ಟಿಗೆ ಮೊದಲು ಅನಂತ ಆಕಾಶದಲ್ಲಿ ವ್ಯಾಪಿಸಿರುವ, ಬ್ರಹ್ಮಾಂಡ ಸೃಷ್ಟಿಯ ನಂತರ ಬ್ರಹ್ಮಾಂಡದೊಳಗೆ ವ್ಯಾಪಿಸಿರುವ, ಪ್ರತಿಯೊಂದು ಪಿಂಡಾಂಡದೊಳಗೆ ತುಂಬಿರುವ, ಹೀಗೆ ಸೃಷ್ಟಿಗೋಸ್ಕರ ಚತುರ್ಮುಖನ ಒಳಗೆ ಪ್ರವೇಶಿಸಿರುವ ರೂಪವೇ  ಭಗವಂತನ ಪುರುಷರೂಪ. ಇದು ಸಹಸ್ರಾರು ಕಾಲು, ಕೈ, ತೊಡೆ, ಸಹಸ್ರಾರು ತಲೆಗಳಿರುವ ಭಗವಂತನ ವಿಶೇಷರೂಪ.


ವಿರಾಜಂ ಬ್ರಹ್ಮಾಣಮ್-

“ಬ್ರಹ್ಮಾಣಂ ಪ್ರಾವಿಶದ್ ವಿಷ್ಣುಃ ಸಹಸ್ರಾಕ್ಷಃ ಸಹಸ್ರಪಾತ್ “ ಇತಿ ಬ್ರಾಹ್ಮೇ । 

“ಅನುಪ್ರವಿಶ್ಯ ಬ್ರಹ್ಮಾಣಂ ಪ್ರಾಣಂ ದಶವಿಧಂ ತಥಾ । 

ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ವರ್ಣಾಂವಾಸೃಜದ್ಧರಿಃ”  ಇತಿ ಗಾರುಡೇ  ॥*॥


ಇಲ್ಲಿ ‘ವಿರಾಜಂ’ ಎಂದರೆ ವಿರಾಡ್ ಎನ್ನುವ ಹೆಸರಿನ ಬ್ರಹ್ಮಶರೀರವನ್ನು ಭಗವಂತ ಪ್ರವೇಶಿಸಿದ ಎಂದರ್ಥ. ಇದನ್ನು ಬ್ರಹ್ಮಾಂಡ ಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ.  ಗರುಡ ಪುರಾಣದಲ್ಲಿಯೂ ಈ ಮಾತು ಬರುತ್ತದೆ- ‘ವಿರಾಡ್  ಬ್ರಹ್ಮಶರೀರದಲ್ಲಿ ಪ್ರವೇಶಿಸಿದ ಶ್ರೀಹರಿಯು, ಅದರಲ್ಲಿ ದಶವಿಧ ಪ್ರಾಣರನ್ನೂ,  ಇಂದ್ರಿಯಗಳನ್ನೂ, ಇಂದ್ರಿಯ ವಿಷಯಗಳನ್ನೂ, ಬ್ರಾಹ್ಮಣಾದಿ ನಾಲ್ಕು ವರ್ಣಗಳನ್ನೂ ಸೃಷ್ಟಿಸಿದನು’.


ವರ್ಣಾಶ್ರಮವಿಭಾಗಾಂಶ್ಚ ರೂಪಶೀಲಸ್ವಭಾವತಃ  ।

ಋಷೀಣಾಂ ಜನ್ಮ ಕರ್ಮಾಣಿ  ವೇದಸ್ಯ ಚ ವಿಕರ್ಷಣಮ್ ॥೨೯॥


ಇಲ್ಲಿ ವಿದುರ  ‘ನನಗೆ ಇನ್ನೂ ಕೇಳಬೇಕು’  ಎಂದು  ಹೇಳುತ್ತಾ - ವರ್ಣಾಶ್ರಮ  ವಿಭಾಗಗಳನ್ನು, ಜ್ಞಾನ ಪರಂಪರೆಯನ್ನು ಉಳಿಸಿ ನಮಗೆ ಕೊಟ್ಟ ಋಷಿಗಳ  ಜನ್ಮಕರ್ಮದ ಮತ್ತು  ವೇದ-ವಿಭಾಗದ [ವಿಕರ್ಷಣಂ ವಿಭಾಗಃ   ॥*॥ ]   ವಿವರಗಳನ್ನೂ ಹೇಳಿರೆಂದು ಮೈತ್ರೇಯರನ್ನು ಕೇಳಿಕೊಳ್ಳುತ್ತಾನೆ.

ಜಡಪ್ರಕೃತಿಯಿಂದ ಅಜ್ಞಾನದ ಪರದೆ ಕವಿದಿದೆ. ಅದರಿಂದಾಗಿ ಕಣ್ಣಿದ್ದೂ ನಾವು ಕುರುಡರಾಗಿದ್ದೇವೆ. ಹೀಗಾಗಿ  ತಮ್ಮ ಸ್ನೇಹವನ್ನು ನೆನಪಿಟ್ಟು, ಸತ್ಯದ ಬಿತ್ತರವನ್ನು ಮಾಡಬೇಕೆಂದು ವಿದುರ ಪ್ರಾರ್ಥಿಸುತ್ತಾನೆ.


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಅಷ್ಟಮೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಎಂಟನೇ ಅಧ್ಯಾಯ ಮುಗಿಯಿತು

*********


Monday, January 27, 2025

Shrimad BhAgavata in Kannada -Skandha-03-Ch-07_03

 ಮುಖತೋsವರ್ತತ ಬ್ರಹ್ಮ ಪುರುಷಸ್ಯ ಕುರೂದ್ವಹ ।

ಯತ್ರೋನ್ಮುಖತ್ವಾದ್  ವರ್ಣಾನಾಂ ಮುಖ್ಯೋSಭೂದ್ ಬ್ರಾಹ್ಮಣೋ  ಗುರುಃ ॥೩೦॥ 


ಬಾಹುಭ್ಯೋSವರ್ತತ ಕ್ಷತ್ರಂ ಕ್ಷತ್ರಿಯಸ್ತಮನುವ್ರತಃ  ।

ಯೋ ಜಾತಸ್ತ್ರಾಯತೇ ವರ್ಣಾನ್ ಪುರುಷಾನ್ ಕಣ್ಠಕಕ್ಷತಾನ್    ॥೩೧॥ 


ವಿಶೋSವರ್ತನ್ತ  ತಸ್ಯೋರ್ವೋರ್ಲೋಕವೃತ್ತಿಕರೀರ್ವಿಭೋಃ ।

ವೈಶ್ಯಸ್ತದುದ್ಭವೋ ವಾರ್ತಾ೦ ನೃಣಾಂ ಯಃ ಸಮವರ್ತಯತ್  ॥೩೨॥


ಪದ್ಭಾಂ ಭಗವತೋ ಜಜ್ಞೇ ಶುಶ್ರೂಷಾ ಕರ್ಮಸಿದ್ಧಯೇ  । 

ತಸ್ಯಾಂ ಜಾತಃ ಪುರಾ ಶೂದ್ರೋ ಯದ್‌ವೃತ್ತ್ಯಾ ತುಷ್ಯತೇ ಹರಿಃ  ॥೩೩॥


ಯಾವರೀತಿ ಭಗವಂತ ನಾಲ್ಕು ವರ್ಣಗಳನ್ನು ಮುಖ, ಬಾಹು, ತೊಡೆ ಮತ್ತು ಪಾದದಿಂದ ಸೃಷ್ಟಿಸಿದ ಎನ್ನುವುದನ್ನು ಮೇಲಿನ ಶ್ಲೋಕದಲ್ಲಿ ವಿವರಿಸಲಾಗಿದೆ.  ಆಚಾರ್ಯರು ಷಾಡ್ಗುಣ್ಯವೆಂಬ ಗ್ರಂಥದ ಪ್ರಮಾಣದೊಂದಿಗೆ ಇದರ ತಾತ್ಪರ್ಯವನ್ನು ನೀಡಿದ್ದಾರೆ. 


“ ಬ್ರಹ್ಮಾಭಿಮಾನೀ ತು  ಭೃಗುರಜನಿ ಬ್ರಹ್ಮಣೋ ಮುಖಾತ್ । ಕ್ಷತ್ರಾಭಿಮಾನೀ ತು  ಮನುರ್ಬ್ರಹ್ಮಬಾಹ್ವೋರಜಾಯತ । ಊರ್ವೋರ್ವಿಡಭಿಮಾನೀ ಚ ವಾಸ್ತುಃ ಪಾದಾತ್ ಕೃತಿಸ್ತಥಾ  । ಏತೇ ಪೂರ್ವಂ  ಹರೇರ್ಜಾತಾ ಬ್ರಹ್ಮಣಸ್ತದನನ್ತರಮ್ । ಏವಂ ರುದ್ರಾಚ್ಚ ವಾಯೋಶ್ಚ ತದನ್ತಸ್ಥಹರೇರ್ಯತಃ ”  ಇತಿ  ಷಾಡ್ಗುಣ್ಯೇ ॥*॥


ಭಗವಂತನ ಮುಖದಿಂದ ಬ್ರಾಹ್ಮಣ ಸ್ವಭಾವವನ್ನು ಪ್ರತಿನಿಧಿಸುವ ಭೃಗು ಮಹರ್ಷಿಯ ಸೃಷ್ಟಿಯಾಯಿತು. (ಮುಂದೆ ಚತುರ್ಮುಖನ ಮುಖದಿಂದ, ರುದ್ರದೇವರ ಮುಖದಿಂದ, ಪುನಃ ಸೃಷ್ಟಿ ಇದೆ. ಇಲ್ಲಿ ನಾವು ನೋಡುತ್ತಿರುವುದು ಭಗವಂತನ ಸೃಷ್ಟಿಯ ಅನುಸಂಧಾನ). ಭೃಗು ಮಹರ್ಷಿಗಳಿಂದ ಬ್ರಾಹ್ಮಣ ವರ್ಣದ (ಬ್ರಾಹ್ಮಣ ಸ್ವಭಾವದ) ಜನಾಂಗ ಬೆಳೆದು ಬಂತು. (ಸಪ್ತರ್ಷಿಗಳ ಜೊತೆಗೆ  ಸೃಷ್ಟರಾದ ಭೃಗು ಮಹರ್ಷಿಗಳು ಮೂಲತಃ ಸೃಷ್ಟಿಯ ಆದಿ-ಬ್ರಾಹ್ಮಣ. ಹೀಗಾಗಿ ಎಲ್ಲಾ ಬ್ರಾಹ್ಮಣ ವರ್ಣದವರೂ ಒಂದು ರೀತಿಯಲ್ಲಿ ಭಾರ್ಗವ ಗೋತ್ರದವರು! ಇನ್ನೊಂದು ವಿಶೇಷವೆಂದರೆ ಭಾಗವತದಲ್ಲೇ ಮುಂದೆ ಹೇಳುವಂತೆ, ಭೃಗು ಮಹರ್ಷಿಗಳು ದೇವತೆಗಳಲ್ಲಿ ಯಾರು ಶ್ರೇಷ್ಠ ಎನ್ನುವ ಪರೀಕ್ಷೆಯನ್ನು ಮಾಡಿ, ಋಷಿಗಳಿಗೆ ‘ಸರ್ವಶ್ರೇಷ್ಠ ದೇವತೆ ನಾರಾಯಣ’  ಎನ್ನುವುದನ್ನು ತೋರಿಸುತ್ತಾರೆ. ಹೀಗಾಗಿ ನಾರಾಯಣ ಉಪಾಸನೆ ಭಾರ್ಗವ ಗೋತ್ರದವರ ಸ್ವಭಾವ ಕೂಡಾ ಹೌದು).

ಹೀಗೆ ಒಂದು ಸ್ವಭಾವದ ಜನರು ಭಗವಂತನ  ಮುಖದಿಂದ ಸೃಷ್ಟರಾದರು. ಆ ಬ್ರಹ್ಮ ಸ್ವಭಾವದ ಚಿಂತನೆಯೇ ಮುಖದ ಚಿಂತನೆ. ಜ್ಞಾನಕ್ಕೆ ಬೇಕಾಗಿರುವ ಐದು ಇಂದ್ರಿಯಗಳಿರುವುದು ಮುಖದಲ್ಲಿ. ಕಣ್ಣಿನಿಂದ ನೋಡಿ ತಿಳಿಯುತ್ತೇವೆ, ಕಣ್ಣು ನೋಡಲಾಗದ್ದನ್ನು ಕಿವಿಯಿಂದ ಕೇಳಿ ತಿಳಿಯುತ್ತೇವೆ, ಮಾತಿನಿಂದ ಜ್ಞಾನ ಹರಿಯುತ್ತದೆ, ಮೂಗು(ಉಸಿರಾಟ) ಸಮಸ್ತ ಇಂದ್ರಿಯಗಳನ್ನು ಚುರುಕುಗೊಳಿಸುವ ಪ್ರಾಣಶಕ್ತಿ. ಮನಸ್ಸು ಈ ಎಲ್ಲವನ್ನೂ ಗ್ರಹಿಸುವ ಇಂದ್ರಿಯ.

ಎರಡನೇ ಸ್ವಭಾವ ಕ್ಷತ್ತ್ರ-ಸ್ವಭಾವ. ಇನ್ನೊಬ್ಬರ ರಕ್ಷಣೆಗಾಗಿ ತಮ್ಮ ಬಲಿದಾನ ಕೊಡುವ ಸ್ವಭಾವ ಈ ವರ್ಣದವರದ್ದು. ಇಂತಹ ವರ್ಣವನ್ನು ಪ್ರತಿನಿಧಿಸತಕ್ಕ ಸ್ವಾಯಂಭುವ ಮನು ಭಗವಂತನ ತೋಳಿನಿಂದ ಸೃಷ್ಟನಾದ. ಎಲ್ಲಾ ವರ್ಣದವರ ರಕ್ಷಣೆ ಕ್ಷತ್ರಿಯರ ಕರ್ತವ್ಯ.

ಭಗವಂತನ ತೊಡೆಯಿಂದ ವೈಶ್ಯ-ವರ್ಣವನ್ನು ಪ್ರತಿನಿಧಿಸುವ ವಾಸ್ತುದೇವನ ಸೃಷ್ಟಿಯಾಯಿತು. ಊರಿಂದ ಊರಿಗೆ ಹೋಗಿ ಆಹಾರವನ್ನು ಬೆಳೆದು ಸರಬರಾಜು ಮಾಡುವುದು ಈ ವರ್ಣದವರ ವಿಶೇಷತೆ. ತೋಟಗಾರಿಕೆ, ಹೈನು, ವ್ಯಾಪಾರ, ಇತ್ಯಾದಿ ಇವರ ಮೂಲ ಕಸುಬು.

ಇಡೀ ದೇಹವನ್ನು ಹೇಗೆ ಕಾಲು ಧಾರಣೆ ಮಾಡುತ್ತದೋ ಹಾಗೇ, ಇಡೀ  ಸಮಾಜವನ್ನು ಧಾರಣೆ ಮಾಡುವ ವರ್ಣ ಶೂದ್ರವರ್ಣ. ಶುಶ್ರೂಷೆ ಇವರ ಸ್ವಭಾವ. ಇಂತಹ ವರ್ಣದ ಮೂಲಪುರುಷನಾದ ಕೃತಿದೇವ ಭಗವಂತನ ಪಾದದಿಂದ ಸೃಷ್ಟಿಯಾದನು. ಶೂದ್ರಧರ್ಮ ಭಗವಂತನಿಗೆ ಅತ್ಯಂತ ಪ್ರಿಯವಾದ ಧರ್ಮ. ಎಲ್ಲರಲ್ಲೂ ಎಲ್ಲಾ ವರ್ಣವಿರುತ್ತದೆ.  ಯಾರಲ್ಲಿ ಮೂಲವರ್ಣದ ಅಂಶ ಹೆಚ್ಚು ಇರುತ್ತದೋ ಅವನು ಆ ವರ್ಣಕ್ಕೆ ಸೇರುತ್ತಾನೆ ಅಷ್ಟೇ.

[ಸ್ವಭಾವಧರ್ಮವನ್ನೇ ನಾವು ನಮ್ಮ ಸ್ವಧರ್ಮವನ್ನಾಗಿ ಇಟ್ಟುಕೊಳ್ಳಬೇಕು. ಆದರೆ ಅದಕ್ಕಾಗಿ ನಾವು ನಮ್ಮ  ಜೀವಸ್ವಭಾವವನ್ನು ಗುರುತಿಸಿಕೊಳ್ಳಬೇಕು.  ಜೀವ ಮೊದಲು ತನ್ನ ತುಡಿತ ಯಾವುದು ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಅದು ಸುಮಾರಾಗಿ ಸ್ವಧರ್ಮವನ್ನು ಗುರುತಿಸಲು ಸಹಾಯಮಾಡುತ್ತದೆ.  ಸ್ವಧರ್ಮಕ್ಕೆ ಎರಡು ಮುಚ್ಚಳಗಳು. ೧. ಸಮಾಜದ ಪ್ರಭಾವ(Environmental force) ಹಾಗೂ ೨. ಆನುವಂಶಿಕ ಪ್ರಭಾವ(Genetic force).  ಇವೆರಡರ ಮಧ್ಯೆ ನಿಜ ಸ್ವಭಾವ ಮುಚ್ಚಿಹೋಗಿರುತ್ತದೆ.  ಹಾಗಾಗಿ ನಾವು ಪ್ರಭಾವವನ್ನೇ ಸ್ವಭಾವವಾಗಿ ಕಾಣುವ ಅಪಾಯ ಹೆಚ್ಚು.  ಸ್ವಧರ್ಮ ಎಂದರೆ ಸ್ವತಂತ್ರವಾದ ಭಗವಂತನ ಅರಿವಿಗೆ ಪೂರಕವಾದ ಧರ್ಮ. ಹಾಗಾಗಿ ಭಗವಂತನ ನೆನಪು ತರುವ ಧರ್ಮ ಸ್ವಧರ್ಮ ಹಾಗೂ ಭಗವಂತನನ್ನು ಮರೆಸುವ ಧರ್ಮ ಪರಧರ್ಮ.  ಹೀಗಾಗಿ ನಮ್ಮ ಮೂಲ ಜೀವಸ್ವಭಾವವನ್ನು ತಿಳಿದುಕೊಳ್ಳಲು ನಾವು ಪದೇಪದೇ ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು. ಆತ್ಮಸಾಕ್ಷಾತ್ಕಾರವಾದಾಗ ನಮಗೆ ನಮ್ಮ ಮೂಲಸ್ವಭಾವದ ಪೂರ್ಣ ಅರಿವು ಬರುತ್ತದೆ]


ಏತತ್ ಕ್ಷತ್ತರ್ಭರ್ಭಗವತೋ ದೈವಕರ್ಮಾತ್ಮರೂಪಿಣಃ

 ಕಃ ಶ್ರದ್ದಧ್ಯಾದುದಾಹರ್ತುಂ  ಯೋಗಮಾಯಾಬಲೋದಯಮ್  ॥೩೩॥


“ಅಧಿಕತ್ವಾದ್ ದೇವಶಬ್ದಾ ದೇವಾಸ್ತೇಷ್ವಧಿಕೋ ಯತಃ  । ದೈವಂ ಹರಿಃ ಕರ್ಮ ಮೂಲಂ ಕೃತಿರಿತ್ಯೇವ ಭಣ್ಯತೇ  । ವ್ಯಾಪ್ತತ್ವಾದಾತ್ಮಶಬ್ದಶ್ಚ  ಶ್ರೀಪತಿತ್ವಾಚ್ಚ ಮಾಧವಃ”  ಇತಿ ಚ  ॥ * ॥


ವೇದವ್ಯಾಸರ ಗೆಳೆಯರೂ, ಸಹಪಾಠಿಯೂ ಆಗಿರುವ ಮೈತ್ರೆಯರು ವಿದುರನನ್ನು ಇಲ್ಲಿ ಕ್ಷತ್ತಃ ಎಂದು ಸಂಬೋಧಿಸುವುದನ್ನು ಕಾಣುತ್ತೇವೆ. ಈ ಹಿಂದೆ ಹೇಳಿದಂತೆ ಕ್ಷತ್ತಃ ಎನ್ನುವ ಪದ ಸಾಮಾಜಿಕವಾಗಿ ‘ದಾಸಿಯ ಮಗ’ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದ್ದರೂ ಕೂಡಾ,  ಇಲ್ಲಿ ಅದನ್ನು ‘ಕ್ಷತ’ ಧಾತುವಿನ ಅರ್ಥದಲ್ಲಿ  ‘ಶಾಸ್ತ್ರದ ರಹಸ್ಯವನ್ನು ತಿಳಿಯಲು ಸಮರ್ಥ’ ಎನ್ನುವ ಧ್ವನಿಯಲ್ಲಿ  ಹೇಳಿರುವುದನ್ನು ಕಾಣುತ್ತೇವೆ.

ಈ ಹಿಂದೆ ಹೇಳಿದಂತೆ ‘ದೈವ’ ಎಂದರೆ ಸರ್ವೋತ್ತಮ ದೇವತೆಯಾದ ಭಗವಂತ.  ಅಂತಹ ಭಗವಂತನಿಂದಲೇ ಜಗತ್ತಿನ ಸಮಸ್ತ ಕರ್ಮ ನಡೆಯುತ್ತದೆ. ಅವನು ನಮ್ಮ ಒಳಗೂ-ಹೊರಗೂ ತುಂಬಿ ಎಲ್ಲವನ್ನೂ ಮಾಡಿಸುತ್ತಾನೆ. ಅವನಿಲ್ಲದೇ ಕರ್ಮವಿಲ್ಲ. ಅವನು ಸರ್ವೋತ್ತಮ, ಸರ್ವಕರ್ತ, ಸರ್ವತ್ರವ್ಯಾಪ್ತ.  

ಇಲ್ಲಿ ‘ಮಾಯಾ’ ಎನ್ನುವ ಪದ ಬಳಕೆಯಾಗಿದೆ.   ನಾವು ಸಾಮಾನ್ಯವಾಗಿ ಮಾಯಾ ಎಂದರೆ  ಮಯನಿಗೆ ಸಂಬಂಧಿಸಿದ  ಇಂದ್ರಜಾಲ  ಅಥವಾ ಕಣ್ಕಟ್ಟು ವಿದ್ಯೆ   ಎಂದುಕೊಳ್ಳುತ್ತೇವೆ. ಆದರೆ  ವೇದಕಾಲದಿಂದಲೂ ಬಳಕೆಯಲ್ಲಿರುವ  ಮಾಯಾ ಎನ್ನುವ ಪದಕ್ಕೆ  ಜ್ಞಾನ, ಇಚ್ಛೆ,  ಮಹಿಮೆ, ಪ್ರಧಾನ,  ಇತ್ಯಾದಿ  ಅರ್ಥಗಳಿವೆ.   ಭಗವಂತನಿಂದ  ವಿಯೋಗ ಇಲ್ಲದ್ದು ಯೋಗಮಾಯೆ. ಭಗವಂತನ ಸ್ವರೂಪಭೂತವಾದ ಮಹಿಮೆ ಯೋಗಮಾಯೆ. ‘ಇಂತಹ ಭಗವಂತನನ್ನು ಕುರಿತು ಹೇಳುವ ಧೈರ್ಯ ಯಾರಿಗಿದೆ’ ಎಂದು ಪ್ರಶ್ನಿಸುತ್ತಾರೆ ಮೈತ್ರೆಯರು. [ಭಗವಂತನ ಕುರಿತು ಪೂರ್ತಿಯಾಗಿ ಯಾರಿಂದಲೂ ಹೇಳಲು ಸಾಧ್ಯವಿಲ್ಲ, ನಾನು ಭಗವಂತನ ಕುರಿತಾದ ಕಿಂಚಿತ್ ವಿಷಯವನ್ನು ನಿನಗೆ ಹೇಳಲು ಪ್ರಯತ್ನಿಸುವೆ ಎನ್ನುವ ಧ್ವನಿ ಇದಾಗಿದೆ].


ಅಹೋ ಭಗವತೋ ಮಾಯಾ  ಮಾಯಿನಾಮಪಿ ಮೋಹಿನೀ

 ಯತ್ ಸ್ವಯಂ ಚಾssತ್ಮವರ್ತ್ಮಾssತ್ಮಾ ನ ವೇದ ಕಿಮುತಾಪರೇ ॥೩೯॥


 ಯತೋಽಪ್ರಾಪ್ಯ ನಿವರ್ತನ್ತೇ ವಾಚಶ್ಚ ಮನಸಾ ಸಹ

 ಅಹಂ ಚಾನ್ಯ ಇಮೇ ದೇವಾಸ್ತಸ್ಮೈ ಭಗವತೇ ನಮಃ ॥೪೦॥

 

‘ಆತ್ಮಾ ನ ವೇದ ಬ್ರಹ್ಮಾ  ।  ಅಹಂ ರುದ್ರಃ :-

“ಗುಣಪೂರ್ತೇರಾತ್ಮಶಬ್ದೋ  ಬ್ರಹ್ಮಾSಹೀನತ್ವತೋ ಹರಃ ।  ಅಹಂಶಬ್ದಸ್ತಥಾSಪ್ಯೇತೌ ನ ಜಾನೀತೋ  ಹರಿಂ ಪರಮ್” ಇತಿ ಬ್ರಾಹ್ಮೇ । 

ಭಗವತೋ ಮಾಯಾಂ ಮಹಿಮಾನಮ್  । 

“ಮಾಯಾ ತು ಮಹಿಮಾ ಪ್ರೋಕ್ತಾ ಪ್ರಾಚುರ್ಯೇ ತು ಮಯಡ್ ಯತಃ” ಇತಿ ಪಾದ್ಮೇ ।

ಆತ್ಮವರ್ತ್ಮಾ ಪರಮಾತ್ಮಗತಿಃ ॥*॥


ಭಗವಂತನ  ಮಹಿಮೆ ಎನ್ನುವುದು ಹೇಳಲಸಾಧ್ಯವಾದ ವಿಸ್ಮಯ.   ಜೀವೋತ್ತಮನಾದ, ಭಗವಂತನ ಮೊದಲ ಮಗ ಚತುರ್ಮುಖ  ಬ್ರಹ್ಮನಿಗೂ(ಮುಖ್ಯಪ್ರಾಣನಿಗೂ) ಕೂಡಾ ಭಗವಂತನ ಮಹಿಮೆ ದಿಗ್ಭ್ರಮೆಗೊಳಿಸುವಂತಹದ್ದು. ಭಗವಂತನ ಪೂರ್ಣ ಮಹಿಮೆ ಶ್ರೇಷ್ಠರಾದ ಆದಿಜೀವರಿಗೇ ಪೂರ್ಣವಾಗಿ ತಿಳಿದಿಲ್ಲ. ವೇದಗಳಿಂದ ಸದಾ ಭಗವಂತನನ್ನು ಸ್ತೋತ್ರಮಾಡುವ ವಾಗ್ದೇವತೆಗಳಾದ ಸರಸ್ವತಿ-ಭಾರತೀಯರೂ  ಭಗವಂತನನ್ನು ಅರಿಯಲಾಗದೇ ಮರಳಿ ಬಂದವರು.

ಸರಸ್ವತಿ -ಭಾರತೀಯರ ನಂತರ ಬರುವವರು ಗರುಡ-ಶೇಷ-ರುದ್ರರು. ವೇದದ ಮನನಕ್ಕೆ ದೇವತೆ ಗರುಡನಾದರೆ, ಪೌರುಷೇಯ ಗ್ರಂಥಗಳಿಗೆ ಶೇಷ ಅಭಿಮಾನಿ. ಗರುಡ ಭಗವಂತನ ವಾಹನನಾದರೆ ಶೇಷ ಭಗವಂತನ ಹಾಸಿಗೆ. ಜೊತೆಗೆ ಅಹಂ-ತತ್ತ್ವದ ದೇವತೆ ರುದ್ರ. ಇವರೆಲ್ಲರೂ ಕೂಡಾ ಭಗವಂತನ ಮಹಿಮೆಯನ್ನು ಪೂರ್ಣವಾಗಿ ತಿಳಿಯಲಾಗದೇ ಮರಳಿ ಬಂದವರು. ಹೀಗಿರುವಾಗ ಉಳಿದ ದೇವತೆಗಳ ಪಾಡೇನು? ಅದಕ್ಕಾಗಿ ‘ನಮಗೆ ಅರ್ಥವಾಗದ ಆ ಭಗವಂತನಿಗೆ ನಮಸ್ಕಾರ’ ಎಂದಷ್ಟೇ ನಾವು ಹೇಳಬಹುದು. ಯಾವುದೂ ನನ್ನದಲ್ಲ, ಎಲ್ಲವೂ ನಿನ್ನದೇ ಎನ್ನುವ ಸತ್ಯವನ್ನು ಅರಿತು, ಸದಾ ಭಗವಂತನಲ್ಲಿ ತನ್ನನ್ನು ಅರ್ಪಿಸಿಕೊಂಡು ಬದುಕುವುದಷ್ಟೇ ನಮಗಿರುವ ಮಾರ್ಗ. 


‘ಈರೀತಿ ಜಗತ್ತನ್ನು ಸೃಷ್ಟಿಮಾಡಿದ, ಅರಿಯಲಾಗದ ಮಹಿಮೆಯುಳ್ಳ ಭಗವಂತನಿಗೆ ನಮಸ್ಕಾರ’ ಎನ್ನುತ್ತಾರೆ ಮೈತ್ರೇಯರು.



॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಷಷ್ಠೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು

*********


Shrimad BhAgavata in Kannada -Skandha-03-Ch-07_02

 ನಿರ್ಭಿಣ್ಣಾನ್ಯಸ್ಯ  ಚರ್ಮಾಣಿ ಲೋಕಪಾಲೋಽನಿಲೋಽವಿಶತ್ ।

 ಪ್ರಾಣೇನಾಂಶೇನ ಸಂಸ್ಪರ್ಶಂ ಯೇನಾಸೌ ಪ್ರತಿಪದ್ಯತೇ ॥೧೬॥ 


ಬ್ರಹ್ಮನ ವಿರಾಟ್ ಶರೀರದಲ್ಲಿ ಚರ್ಮ ಆವರಿಸಿತು ಮತ್ತು ಅದರಲ್ಲಿ ಲೋಕಪಾಲಕ ಎನಿಸಿರುವ ಮರೀಚಿ ಎನ್ನುವ ವಾಯು ಬಂದು ಕುಳಿತ. ಅವನು ಚರ್ಮಕ್ಕೆ ಚೈತನ್ಯವನ್ನು ಕೊಟ್ಟು, ಸ್ಪರ್ಶಾನುಭಾವವನ್ನು ನೀಡಿದ. (ಇಲ್ಲಿ ಮರೀಚಿ ಎಂದಾಗ ಅವನೊಳಗೆ ಚತುರ್ಮುಖ ಮತ್ತು ಚತುರ್ಮುಖನೊಳಗೆ ಭಗವಂತ ಇದ್ದಾನೆ ಎನ್ನುವುದನ್ನು ನಾವು ತಿಳಿದಿರಬೇಕು.)

[ಈ ಹಿಂದೆ ಹತ್ತು ರೂಪದಲ್ಲಿ ಚತುರ್ಮುಖನ ದೇಹ ಪ್ರವೇಶಿಸಿದವನು ಪ್ರಧಾನ ವಾಯುವಾದರೆ. ಇಲ್ಲಿ ಹೇಳಿರುವ  ಸ್ಪರ್ಶೇನ್ದ್ರಿಯ ಅಭಿಮಾನಿ ಪ್ರಧಾನ ವಾಯುವಿನ ಪುತ್ರ.  ಈ ವಿಷಯವನ್ನು ಆಚಾರ್ಯರು ಭಾಗವತ ತಾತ್ಪರ್ಯದಲ್ಲಿ ತತ್ತ್ವನಿರ್ಣಯದ ಪ್ರಮಾಣ ಸಹಿತ ವಿವರಿಸಿದ್ದಾರೆ. “ಪ್ರಾಣಃ ಪ್ರಥಮಜೋ ಯಸ್ತು ಪ್ರಧಾನೋ ವಾಯುರೀರಿತಃ  | ತ್ವಗಾತ್ಮಾದ್ಯಾಸ್ತು ತತ್ಪುತ್ರಾ ದ್ವಿಧಾ ಭೂತಮುದಾಹೃತಮ್”.  

ಇಲ್ಲಿ ನಾವು ಇನ್ನೊಮ್ಮೆ ನೆನಪಿಸಿಕೊಳ್ಳಬೇಕಾದ ಮುಖ್ಯವಾದ ವಿಷಯವೇನೆಂದರೆ, ದೇವತೆಗಳಿಗೆ ಅನೇಕ ಹುಟ್ಟು. ಅವರು ಮೊದಲು ಭಗವಂತನಿಂದ ಹುಟ್ಟಿದರೆ, ನಂತರ ಚತುರ್ಮುಖನಿಂದ ಹುಟ್ಟುತ್ತಾರೆ. ಮತ್ತೆ ಮುಖ್ಯಪ್ರಾಣನಿಂದ, ಆನಂತರ ಶಿವನಿಂದ, ಈ ರೀತಿ ಅನೇಕ ಸ್ತರದಲ್ಲಿ ದೇವತೆಗಳು ಸೃಷ್ಟಿಯಾಗುತ್ತಾರೆ ]

ಹೀಗೆ ಮೂಗು, ನಾಲಿಗೆ, ಕಣ್ಣು, ತೊಗಲು, ಕಿವಿ, ವಾಕ್, ಪಾಣಿ, ಪಾದ, ಪಾಯು, ಉಪಸ್ಥಗಳ ಸೃಷ್ಟಿಯಾಯಿತು. ಜೊತೆಗೆ ಪಂಚಭೂತಗಳ ಮತ್ತು ಪಂಚತನ್ಮಾತ್ರೆಗಳ ಸೃಷ್ಟಿಯೂ ಆಯಿತು. ಇಂದ್ರಿಯಗಳ ವಿಷಯ ಗ್ರಹಣಮಾಡಲು ಒಳಗೆ ಮನಸ್ಸಿನ ಸೃಷ್ಟಿಯೂ ಆಯಿತು.  ಮನಸ್ಸು ಗ್ರಹಣ ಮಾಡಿದ ವಿಷಯವನ್ನು ತೀರ್ಮಾನಮಾಡುವ ಬುದ್ಧಿ,  ನೆನಪಿನಲ್ಲಿಟ್ಟುಕೊಳ್ಳುವ ಚಿತ್ತ ಮತ್ತು ಕರ್ತೃತ್ವದ ಅಭಿಮಾನವಾದ ಅಹಂಕಾರ. ಈ ಮೂರರ ಅಭಿವ್ಯಕ್ತಿ ಆಗಬೇಕಿದೆ. ಇವೆಲ್ಲವೂ ಆದ ಬಳಿಕವೇ ಶರೀರಕ್ಕೆ ಪೂರ್ಣತೆ ಬರುತ್ತದೆ. ಆಗ ಅದನ್ನು ಪುರುಷ ಶರೀರ ಎಂದು ಹೇಳುತ್ತಾರೆ. (ಮರ, ಪ್ರಾಣಿ-ಪಕ್ಷಿ ಇತ್ಯಾದಿಗಳಲ್ಲಿ ಈ ಎಲ್ಲಾ ಅಂಗಗಳು ಪೂರ್ಣಪ್ರಮಾಣದಲ್ಲಿ ವಿಕಾಸನ ಹೊಂದಿರುವುದಿಲ್ಲ. ಹಾಗಾಗಿ ಅವುಗಳ ಶರೀರವನ್ನು ಪುರುಷಶರೀರ ಎಂದು ಹೇಳುವುದಿಲ್ಲ. ಕೇವಲ ಮನುಷ್ಯಶರೀರವನ್ನು ಮಾತ್ರ ಪುರುಷಶರೀರ ಎನ್ನುತ್ತಾರೆ. ಅದಕ್ಕಾಗಿ ಭಗವಂತ ಪುರುಷರೂಪನಾಗಿಯೇ ಅದನ್ನು ಸೃಷ್ಟಿಮಾಡಿದ). 


ಆತ್ಮಾನಂ ಚಾಸ್ಯ ನಿರ್ಭಿಣ್ಣಂ ವಾಚಸ್ಪತಿರಥಾsವಿಶತ್ ।  

ಬುದ್ದ್ಯಾ ಸ್ವಾಂಶೇನ ಯೇನಾಸೌ ನಿಶ್ಚಯಂ ಪ್ರತಿಪದ್ಯತೇ ॥೨೪॥


ಅಹಮಸ್ಯ ವಿನಿರ್ಭಿಣ್ಣಮಭಿಮಾನೋSವಿಶತ್ ಪದಮ್  । 

ಕರ್ತ್ರಾಂsಶೇನ ಚ  ಯೇನಾಸೌ ಕರ್ತವ್ಯಂ ಪ್ರತಿಪದ್ಯತೇ ॥೨೫॥


ಸತ್ತ್ವಂ ಚಾಸ್ಯ ವಿನಿರ್ಭಿಣ್ಣಂ  ಮಹಾನ್ ಧಿಷ್ಣ್ಯಮುಪಾವಿಶತ್ । 

ಚಿತ್ತೇನಾಂಶೇನ ಯೇನಾಸೌ ವಿಜ್ಞಾನಂ ಪ್ರತಿಪದ್ಯತೇ ॥೨೬॥


“ಅಹಂ ಸತ್ತ್ವಮಿತಿ ದ್ವೇಧಾ ಬ್ರಹ್ಮನಾಡ್ಯಾ ಅವಾನ್ತರಮ್ । ಕರ್ತೃನಾಮಾ  ತ್ವಹಙ್ಕಾರಸ್ತ್ವಹನ್ನಾಡ್ಯಾಂ ವ್ಯವಸ್ಥಿತಃ । ಸತ್ತ್ವನಾಡ್ಯಾಂ ತಥಾ  ಚಿತ್ತಮಭಿಮಾನೋ ಹರಸ್ತಥಾ । ಅಹನ್ನಾಡ್ಯಾಂ ಸತ್ತ್ವನಾಡ್ಯಾಂ ಬ್ರಹ್ಮಾ ಚೈವ ವ್ಯವಸ್ಥಿತಃ । ಆತ್ಮನಾಡ್ಯಾಂ ತಥಾ ಬುದ್ದಿಸ್ತತ್ರಸ್ಥಶ್ಚ ಬೃಹಸ್ಪತಿಃ” ಇತಿ ಚ  ॥*॥ 


ನಮ್ಮ ದೇಹದ ಒಳಗೆ ಒಂದು ಬ್ರಹ್ಮನಾಡಿ ಇದೆ. ನಾಭೀಮೂಲದಿಂದ ಶಿರೋಮಧ್ಯದ ತನಕ ಹರಿಯುವ ಇದನ್ನು ಆತ್ಮನಾಡಿ ಅಥವಾ ಸುಷುಮ್ನನಾಡಿ ಎಂದೂ ಕರೆಯುತ್ತಾರೆ. ಅದರ ಮಧ್ಯದಲ್ಲಿರುವ ಹೃದಯದಲ್ಲಿ ಹೃತ್ಕಮಲವಿದೆ(thymus gland). ಅಲ್ಲೇ  ಭಗವಂತ, ಜೀವ, ಪ್ರಾಣ, ಮನೋಭಿಮಾನಿಗಳಾದ ಗರುಡ-ಶೇಷ-ರುದ್ರ ಇರುವುದು. ಎಲ್ಲಾ ಇಂದ್ರಿಯಗಳ ಮೂಲ ಇರುವುದೂ ಅಲ್ಲಿಯೇ. ಸಂಸ್ಕೃತದಲ್ಲಿ ಹೃದಯಕ್ಕೆ ‘ಸಂದೇಹ’ ಎನ್ನುತ್ತಾರೆ. ಸಂದೇಹ ಎಂದರೆ ಸಮೀಚೀನವಾದ ದೇಹದ ಪ್ರಮುಖ ಭಾಗ.

ಚತುರ್ಮುಖನ ದೇಹದಲ್ಲಿನ ಆತ್ಮನಾಡಿ ತೆರೆದುಕೊಂಡಿತು ಮತ್ತು ಅಲ್ಲಿ ವಾಚಸ್ಪತಿ(ಬೃಹಸ್ಪತಿ) ಪ್ರವೇಶಿಸಿ ನೆಲೆ ನಿಂತ. ಇದರಿಂದ ಬುದ್ದಿ ಕೆಲಸಮಾಡಲು ಪ್ರಾರಂಭಿಸಿತು. ಇದರಿಂದ ಸರಿ-ತಪ್ಪುಗಳ ನಿರ್ಣಯ ಬಂತು.

ನಂತರ ಬ್ರಹ್ಮನಾಡಿಯಲ್ಲಿ ಇನ್ನೊಂದು ಕವಲು ‘ಅಹಂನಾಡಿ’ ತೆರೆದುಕೊಂಡಿತು.  ಅಲ್ಲಿ ಶಿವ ನೆಲೆನಿಂತು ಪ್ರೇರಣೆ ಮಾಡಿದ. ಇದರಿಂದ ಅಭಿಮಾನ (awareness of self) ಜಾಗೃತವಾಯಿತು. 

ಬ್ರಹ್ಮನಾಡಿಯ ಇನ್ನೊಂದು ಕವಲು ಸತ್ವನಾಡಿ. ಅಲ್ಲಿ ಸ್ವಯಂ ಚತುರ್ಮುಖ ಪ್ರವೇಶಿಸಿದ. ಅದು ನಮ್ಮ ನೆನಪಿನ ಬಂಡಾರ. ಬ್ರಹ್ಮಾಂಡದಲ್ಲಿ ಯಾವುದು ಮಹತತ್ತ್ವವೋ ಅದೇ ಪಿಂಡಾಡದಲ್ಲಿ ಚಿತ್ತ. 

[ಸತ್ವನಾಡಿಯ ಇನ್ನೊಂದು ಹೆಸರು ವಿಜ್ಞಾನನಾಡಿ.  ಚತುರ್ಮುಖನ ಇನ್ನೊಂದು ಹೆಸರೂ ವಿಜ್ಞಾನಶಕ್ತಿ.  ವಿಜ್ಞಾನ ಎಂದರೆ ನಮ್ಮ ಚಿತ್ತದಲ್ಲಿ ತಿಳಿದಿರುವ ವಿಷಯಗಳಿಂದ, ತಿಳಿಯದ ವಿಷಯಗಳನ್ನು ಊಹಿಸಿ ತೀರ್ಮಾನಕ್ಕೆ ಬರುವುದು. ಅದು ತಾರ್ಕಿಕ. ಚಿತ್ತದ ವಿಸ್ತಾರವೇ ಚೇತನ ಮತ್ತು ಅದರ ಅಭಿಮಾನಿ ಶ್ರೀಲಕ್ಷ್ಮಿ. ಅದು ಜನ್ಮ-ಜನ್ಮಾಂತರದ ಸಮಸ್ತ ನೆನಪೂ ಇರುವ ಅದ್ಭುತ ಅಂತರಂಗ ಪ್ರಪಂಚ.  ಚೇತನದ ಕುರಿತು ಇಲ್ಲಿ ವಿಶೇಷವಾಗಿ ಹೇಳಿಲ್ಲ. ಕನಸಿನ ಪ್ರಪಂಚವೂ ಚಿತ್ತದ ಚಮತ್ಕಾರ. ಷಟ್-ಪ್ರಶ್ನ ಉಪನಿಷತ್ ಈ ಕುರಿತು ವಿವರಿಸುತ್ತದೆ].

ಹೀಗೆ ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಎಲ್ಲವೂ ಕೆಲಸಮಾಡತೊಡಗಿತು. ಎಲ್ಲಾ ಅವಸ್ಥೆಗಳಲ್ಲಿ(ಎಚ್ಚರ-ಕನಸು-ನಿದ್ದೆ) ಒಂದು ಪೂರ್ಣಾಂಗನಾದ, ಮನುಷ್ಯನಿಗೆ ಬೇಕಾದ  ವ್ಯವಸ್ಥೆ ಮೊದಲು ಚತುರ್ಮುಖನ ಶರೀರದಲ್ಲಿ ಆಯಿತು. ಮುಂದೆ ಭಗವಂತ, ಚತುರ್ಮುಖ, ಮುಖ್ಯಪ್ರಾಣ, ಶಿವನಿಂದ ಮತ್ತು  ಸಮಸ್ತ ದೇವತೆಗಳಿಂದ  ಲೋಕದಲ್ಲಿ ಸೃಷ್ಟಿಯ ಪುನರಾವರ್ತಿಯಾಗುತ್ತದೆ. ಹೀಗೆ ಪ್ರಪಂಚ ನಿರ್ಮಾಣವಾಗುತ್ತದೆ.


ಹೀಗೆ ನಿರ್ಮಾಣವಾದ ಮನುಷ್ಯರು ಎಲ್ಲರೂ ಒಂದೇ ರೀತಿ ಇರಲಿಲ್ಲ. ಮನುಷ್ಯರಲ್ಲಿ ಕೆಲವರು ಬ್ರಾಹ್ಮಣರಾದರು, ಕೆಲವರು ಕ್ಷತ್ರಿಯರಾದರು, ಕೆಲವರು ವೈಶ್ಯರಾದರು ಮತ್ತೆ ಕೆಲವರು ಶೂದ್ರರಾದರು. 

ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ನಾವಿಲ್ಲಿ ವರ್ಣ ಪದ್ದತಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು.  ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ- “ಚಾತುರ್ವರ್ಣ್ಯಮ್  ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ”  - ತ್ರಿಗುಣಗಳು ಮತ್ತು ಕರ್ಮಗಳ ವಿಂಗಡಣೆಯಿಂದ ನಾಲ್ಕು ವರ್ಣಗಳ ಗುಂಪನ್ನು ನಾನು ನಿರ್ಮಿಸಿದೆ.  ಇಲ್ಲಿ  ಕೃಷ್ಣ ಹೇಳುತ್ತಾನೆ: "ನಾನು ಗುಣಕರ್ಮವಿಭಾಗಶಃ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದೆ ಎಂದು". ನಮಗೆ ತಿಳಿದಂತೆ ನಾಲ್ಕು ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು  ಶೂದ್ರ. ಭಗವಂತನ ಈ ನುಡಿಯನ್ನು ತಪ್ಪಾಗಿ ಅರ್ಥೈಸುವವರೇ ಹೆಚ್ಚು. ಭಗವಂತನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದರೆ ಈ ವರ್ಣಭೇದ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವವರೂ ಇದ್ದಾರೆ. ಮೂಲಭೂತವಾಗಿ ನೋಡಿದರೆ ಕೃಷ್ಣ ಇಲ್ಲಿ ಹೇಳಿರುವುದು ಜಾತಿಯ ಬಗ್ಗೆ ಅಲ್ಲ, ಬದಲಿಗೆ ನಾಲ್ಕು ವರ್ಣಗಳ ಬಗ್ಗೆ. 

ವರ್ಣ ಮತ್ತು ಜಾತಿಯನ್ನು ಸಂಕೀರ್ಣವಾಗಿ ಕೂಡಾ ಬಳಸುತ್ತಾರೆ. ಸಂಸ್ಕೃತದಲ್ಲಿ ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಒಂದು ಪದಕ್ಕೆ ಅನೇಕ ಆಯಾಮವಿರುವುದರಿಂದ ನಮಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಜಾತಿ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹುಟ್ಟುಗುಣ ಅಥವಾ ಸ್ವಭಾವ(ಹುಟ್ಟುವಾಗಲೇ ಪಡೆದುಕೊಂಡು ಬಂದಿದ್ದು, ಮೂಲ ತ್ರೈಗುಣ್ಯಕ್ಕೆ ಸಂಬಂಧಪಟ್ಟಿದ್ದು) ಅದು ವರ್ಣ; ಇನ್ನೊಂದು ಯಾವ ಮನೆಯಲ್ಲಿ ಹುಟ್ಟಿದನೋ ಆ ಜಾತಿ (ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದವ ಬ್ರಾಹ್ಮಣ, ಕ್ಷತ್ರಿಯನ ಮನೆಯಲ್ಲಿ ಹುಟ್ಟಿದವ ಕ್ಷತ್ರಿಯ). ಈ ಸೂಕ್ಷ್ಮ ಅರಿಯದಿದ್ದರೆ ಇಲ್ಲಿ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ವರ್ಣ ಎಂದರೆ ಮೂಲ ಹುಟ್ಟು ಸ್ವಭಾವ.

ವರ್ಣ ಅಂದರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಅಂದರೆ ಏನು ? "ಆತನ ಬಣ್ಣ ಬಯಲಾಯಿತು" ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ ವ್ಯಕ್ತಿತ್ವ ಬಯಲಾಗುವುದು. ಇಲ್ಲಿ ಬಣ್ಣ ಎಂದು ಹೇಳಲು ಇನ್ನೊಂದು ಕಾರಣವಿದೆ. ನಮ್ಮ ಸ್ವಭಾವಕ್ಕೆ ಬಣ್ಣವಿದೆ [ಇದು ನಮ್ಮ ಕಣ್ಣಿಗೆ ಕಾಣದ ಬಣ್ಣ]. ಸಾತ್ವಿಕ-ಬಿಳಿ; ರಾಜಸ-ಕೆಂಪು; ತಾಮಸ-ಕಪ್ಪು. ಹೀಗೆ ಬಣ್ಣ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಸ್ವಭಾವ ನಮ್ಮೊಳಗಿನ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಗಳನ್ನು ಹೊರಹೊಮ್ಮುತ್ತದೆ[ಇದು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದು]. ತುಂಬಾ ಕೋಪ ಬಂದಾಗ ಮೈಯಿಂದ ಕೆಂಪು ಕಿರಣ; ಮನಸ್ಸು ಪ್ರಸನ್ನವಾಗಿದ್ದಾಗ ಹಸಿರು ಕಿರಣ;  ಜ್ಞಾನದ ಆಳ ತಿಳಿದ ಜ್ಞಾನಿಯ ಮೈಯಿಂದ ನೀಲ ಕಿರಣ. ಹೀಗೆ ಬಣ್ಣ ನಮ್ಮ ಒಳಗಿನ ಸ್ವಭಾವವನ್ನು ಪ್ರತಿನಿಧಿಸುತ್ತದೆ.  ಈ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ.

ಮೇಲಿನ ವಿವರವನ್ನು ತಿಳಿದಾಗ ಸ್ಪಷ್ಟವಾಗಿ ನಮಗೆ ಅರ್ಥವಾಗುವುದು ಒಂದು ವಿಚಾರ.  ಜಾತಿ- ಹುಟ್ಟಿದ ಮನೆಗೆ ಮತ್ತು ತಂದೆ-ತಾಯಿಯನ್ನು ಅವಲಂಬಿಸಿ ಬರುವುದು.   ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ ಸ್ವಭಾವ. ಈ ವರ್ಣವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಕಾಣಬಹುದು. ಭಾರತದಲ್ಲಿ ಶಾಸ್ತ್ರಕಾರರು ಇದನ್ನು ಗುರುತಿಸಿ ಅದಕ್ಕೆ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು  ಶೂದ್ರ ಎನ್ನುವ ಹೆಸರು ಕೊಟ್ಟರು ಅಷ್ಟೇ.  ಜಾತಿ ಜನ್ಮತಃ ಆದರೆ ವರ್ಣಗಳನ್ನು ಗುಣಕರ್ಮದಿಂದ ವಿಭಾಗಿಸಿರುವುದು.  ಬ್ರಾಹ್ಮಣರ ಮನೆಯಲ್ಲಿ ಹುಟ್ಟುವ ಹುಡುಗ ಬ್ರಾಹ್ಮಣ ಜಾತಿಯ ಹುಡುಗ. ಆದರೆ ಆತ ಸ್ವಭಾವತಃ  ಕ್ಷತ್ರಿಯನಾಗಿರಲೂಬಹುದು; ಒಂದೇ ಮನೆಯಲ್ಲಿ ನಾಲ್ಕು ವರ್ಣದ ಮಕ್ಕಳೂ ಹುಟ್ಟಬಹುದು. ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು ಮಹಾಬ್ರಾಹ್ಮಣ. ಇದು ವರ್ಣವನ್ನು ಅವಲಂಬಿಸಿ  ಬಂದದ್ದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ-ವಿದುರ 'ಕ್ಷತ್ತಾ'(ಕೆಲಸದವಳ ಮಗ). ಇದು ಸಾಮಾಜಿಕ ರಾಜಕೀಯದಿಂದ ಬಂದಿದ್ದು! (ಮಹಾಭಾರತ ಕಾಲದಲ್ಲೇ ಜಾತಿ ರಾಜಕೀಯ ದುರ್ಯೋಧನನಿಂದ ಪ್ರಾರಂಭವಾಗಿರುವುದನ್ನು ನಾವು ಕಾಣಬಹುದು).

ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವನ್ನು ಜೀವಕ್ಕೆ ಹುಟ್ಟುವಾಗಲೇ ಕೊಟ್ಟಿರುತ್ತಾನೆ. ವರ್ಣ ಇಲ್ಲದೆ ಸಮಾಜ ಸುಗಮವಾಗಿ ನಡೆಯದು. ಪುರುಷಸೂಕ್ತದಲ್ಲಿ  ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ ಕರ್ಮಕ್ಕನುಗುಣವಾಗಿ  ದೇಹದ ನಾಲ್ಕು ಭಾಗವಾಗಿ ಈ ರೀತಿ ವಿವರಿಸಿದ್ದಾರೆ: “ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ  ಯದ್ವೈಶ್ಯಃ  ಪದ್ಭ್ಯಾಂಮ್ ಶೂದ್ರೋ ಅಜಾಯತ”. ದೇಹಕ್ಕೆ ಪಂಚಾಗವಾಗಿರುವ ಹಾಗು ಪೂಜೆಯಲ್ಲಿ ಶ್ರೇಷ್ಠ ಎನಿಸಿದ ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ ಎಂದರ್ಥ. ಈತನಲ್ಲಿ ಅರೆಸೊತ್ತಿಗೆ ಇರುವುದಿಲ್ಲ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ (Service Quality). ಈ  ಗುಣ  ಇಲ್ಲದವ  ಮನುಷ್ಯನೇ  ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(majority), ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು  ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.

ವೈಶ್ಯನನ್ನು  ದೇಹದ ಸೊಂಟದ ಭಾಗಕ್ಕೆ ಹೋಲಿಸಿದರು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ(Production).  ಸಾಮಾನ್ಯವಾಗಿ ಹಿಂದಿನ ಕಾಲದ ಜೀವನ ಪದ್ದತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಆದ್ದರಿಂದ  ಅವರನ್ನು ಸೊಂಟಕ್ಕೆ ಹೋಲಿಸಿದ್ದಾರೆ.

 ಕ್ಷತ್ರಿಯರ ಸ್ವಭಾವ ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಮತ್ತು ಆಡಳಿತ (Protection and Administration). ಹಾಗಾಗಿ ಅವರನ್ನು ತೋಳಿಗೆ ಹೋಲಿಸಿದ್ದಾರೆ.

ಇನ್ನು ಬ್ರಾಹ್ಮಣ ಸ್ವಭಾವ; ಇವರ ಮೂಲಕರ್ಮ  ಜ್ಞಾನದ ಮಾರ್ಗದರ್ಶನ(Wisdom). ಅದಕ್ಕಾಗಿ  ಇವರನ್ನು  ತಲೆಗೆ ಹೋಲಿಸಿದರು. ಸ್ವಭಾವತಃ ಬ್ರಾಹ್ಮಣ ಎನಿಸಿದವನು ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸುಳ್ಳು ಹೇಳದ, ಮುಖವಾಡ ಇಲ್ಲದ ಬದುಕು, ಸದಾ ಅಂತರಂಗ ಬಹಿರಂಗ ಶುದ್ಧಿ- ಈ ಮೂಲ ಗುಣಗಳನ್ನು ಹೊಂದಿರುತ್ತಾನೆ.

ಹೀಗೆ ಈ ನಾಲ್ಕು ವರ್ಣಗಳು  ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು ಎನ್ನುವ ಭಾವನೆ ಸಲ್ಲ. ಎಲ್ಲರೂ ಮೋಕ್ಷ ಯೋಗ್ಯ ಜೀವರೇ. ಇದು ಆಧ್ಯಾತ್ಮಿಕ  ವರ್ಗೀಕರಣ ಮತ್ತು ವ್ಯವಸ್ಥೆ. 'ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ' ಎಂದು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿ ಹೇಳಿರುವುದುಂನು ಕಾಣುತ್ತೇವೆ. 

ಸಾತ್ವಿಕರಾದ ದೇವತೆಗಳಲ್ಲಿ ವರ್ಣವಿಭಾಗ ಇಲ್ಲ; ತಾಮಸರಾದ ಅಸುರರಲ್ಲಿ ವರ್ಣವಿಭಾಗ ಇಲ್ಲ; ರಾಜಸರಾದ ಮನುಷ್ಯರಲ್ಲಿ ಮಾತ್ರವೇ ಈ ವ್ಯವಸ್ಥೆ. ರಾಜಸರಾದ ಮನುಷ್ಯರಲ್ಲಿಯೂ ಮತ್ತೆ ಮೂರು ವಿಧ: ಸಾತ್ವಿಕ-ರಾಜಸರು, ರಾಜಸ-ರಾಜಸರು, ಮತ್ತು ತಾಮಸ-ರಾಜಸರು. ತಮೋಯೋಗ್ಯರಾದ ತಾಮಸ-ರಾಜಸರಲ್ಲಿ ವರ್ಣವ್ಯವಸ್ಥೆ ಇಲ್ಲ. ನಿತ್ಯ ಸಂಸಾರಿಗಳಾದ ರಾಜಸ-ರಾಜಸರಲ್ಲೂ ವರ್ಣವ್ಯವಸ್ಥೆ ಇಲ್ಲ, ಮುಕ್ತಿ ಯೋಗ್ಯರಾದ ಸಾತ್ವಿಕ-ರಾಜಸರಲ್ಲಿ ಮಾತ್ರವೇ ಈ ವಿಭಾಗ.

 

ಬನ್ನಿ, ಈ ಎಲ್ಲಾ ಹಿನ್ನೆಲೆಯೊಂದಿಗೆ ಮುಂದಿನ ಶ್ಲೋಕವನ್ನು ನೋಡೋಣ-